ಕರ್ನಾಟಕ

karnataka

ETV Bharat / city

ಆಕಸ್ಮಿಕ ಬೆಂಕಿ: ನಾಲ್ಕು ಗುಡಿಸಲು ಭಸ್ಮ

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಾಳಿಂಗದೇವನ ಗೊಲ್ಲರಹಟ್ಟಿಯಲ್ಲಿ ಆಕಸ್ಮಿಕ ಬೆಂಕಿ ತಗುಲಿ 4 ಗುಡಿಸಲುಗಳು ಸುಟ್ಟು ಕರಕಲಾಗಿದೆ.

By

Published : Mar 15, 2019, 6:45 PM IST

ತುಮಕೂರು ಜಿಲ್ಲೆಯ ಕಾಳಿಂಗದೇವನ ಗೊಲ್ಲರಹಟ್ಟಿಯಲ್ಲಿ ಆಕಸ್ಮಿಕ ಬೆಂಕಿ ಅವಗಡ

ತುಮಕೂರು: ಆಕಸ್ಮಿಕ ಬೆಂಕಿ ತಗುಲಿ 4 ಗುಡಿಸಲುಗಳು ಸುಟ್ಟು ಕರಕಲಾಗಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಾಳಿಂಗದೇವನ ಗೊಲ್ಲರಹಟ್ಟಿಯಲ್ಲಿ ನಡೆದಿದೆ.

ರೇಣುಪ್ಪ, ಶಂಕರಪ್ಪ, ಕನಕದಾಸಪ್ಪ, ಈರಣ್ಣ ಎಂಬುವರಿಗೆ ಸೇರಿದ ಗುಡಿಸಲುಗಳು ಸುಟ್ಟುಹೋಗಿವೆ. ಗುಡಿಸಲುಗಳ ಸಮೀಪ ಇದ್ದ ಅಡಿಕೆ ಹಾಗೂ ತೆಂಗಿನ ಮರಗಳಿಗೂ ಬೆಂಕಿ ತಗುಲಿ ಹಾನಿಯಾಗಿದೆ.

ತುಮಕೂರು ಜಿಲ್ಲೆಯ ಕಾಳಿಂಗದೇವನ ಗೊಲ್ಲರಹಟ್ಟಿಯಲ್ಲಿ ಆಕಸ್ಮಿಕ ಬೆಂಕಿ ಅವಗಡ

ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ABOUT THE AUTHOR

...view details