ಕರ್ನಾಟಕ

karnataka

ETV Bharat / city

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಜಾಕ್ಕೆ ಯುವ ಕಾಂಗ್ರೆಸ್ ಆಗ್ರಹ - ಮೋಜು ಮಸ್ತಿಯಲ್ಲಿ ಸುಧಾಕರ್​​

ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಡಾ.ಕೆ.ಸುಧಾಕರ್​ ಅವರನ್ನು ಸಂಪುಟದಿಂದ ಹೊರಗಿಡದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತದೆ ಎಂದು ಯುವ ಕಾಂಗ್ರೆಸ್​ ಎಚ್ಚರಿಕೆ ನೀಡಿದೆ.

youth congress demands dismissal of dr.k.sudhakar minister post
ಸಚಿವ ಡಾ.ಕೆ.ಸುಧಾಕರ್ ವಜಾಕ್ಕೆ ಯುವ ಕಾಂಗ್ರೆಸ್ ಆಗ್ರಹ

By

Published : Apr 14, 2020, 5:46 PM IST

ಶಿವಮೊಗ್ಗ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ದೇಶವೇ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವಾಗ ಜವಾಬ್ದಾರಿಯುತ ಸಚಿವರಾಗಿ ಜನರ ಸಂಕಷ್ಟಕ್ಕೆ ಸ್ಪಂದಿಸದೆ ತಮ್ಮ ಕುಟುಂಬದ ಜೊತೆ ಮೋಜು ಮಸ್ತಿ ಮಾಡುತ್ತಿದೆ ಎಂದು ಯುವ ಕಾಂಗ್ರೆಸ್​​ ಆರೋಪಿಸಿದೆ.

ಸಚಿವರು ಕುಟುಂಬದೊಂದಿಗೆ ಸ್ವಿಮ್ಮಿಂಗ್ ಫೂಲ್​​​​ನಲ್ಲಿ ಈಜಾಡುತ್ತಾ, ನಾನು ಬಹುದಿನಗಳ ನಂತರ ನನ್ನ ಕುಟುಂಬದೊಂದಿಗೆ ಕಾಲ ಕಳೆದಿದ್ದೇನೆ. ಇಲ್ಲೂ ನಾನು ಸಾಮಾಜಿಕ ಅಂತರ ಕಾಯ್ದುಕೊಂಡಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಚಿವ ಪೋಸ್ಟ್​​ ಮಾಡಿದ್ದರು.

ABOUT THE AUTHOR

...view details