ಕರ್ನಾಟಕ

karnataka

ETV Bharat / city

ಶಿವಮೊಗ್ಗ: ಶ್ರೀ ಭಗೀರಥ ಉಪ್ಪಾರ ಯುವಸೇನೆಯಿಂದ ಬಡವರಿಗೆ ದಿನಸಿ ಕಿಟ್ ವಿತರಣೆ - ಶ್ರೀ ಭಗೀರಥ ಉಪ್ಪಾರ ಯುವಸೇನೆಯಿಂದ ಕಿಟ್ ವಿತರಣೆ

ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 200ಕ್ಕೂ ಹೆಚ್ಚು ಕಡುಬಡವರಿಗೆ ಶ್ರೀ ಭಗೀರಥ ಉಪ್ಪಾರ ಯುವಸೇನೆ ವತಿಯಿಂದ ದಿನಸಿ ಕಿಟ್​ಗಳನ್ನು ವಿತರಿಸಲಾಯಿತು.

Shimoga Kit distribution by Sri Bhagirath Uppara Yuva Senane
ಶಿವಮೊಗ್ಗ: ಶ್ರೀ ಭಗೀರಥ ಉಪ್ಪಾರ ಯುವಸೇನೆಯಿಂದ ಬಡವರಿಗೆ ಕಿಟ್ ವಿತರಣೆ

By

Published : Jun 7, 2020, 4:54 PM IST

ಶಿವಮೊಗ್ಗ: ಲಾಕ್​ಡೌನ್ ನಿಂದಾಗಿ ಕಾರ್ಮಿಕರು ಹಾಗೂ ಬಡವರು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಜೀವನ ನಡೆಸಲು ಕಷ್ಟಪಡುತ್ತಿದ್ದ ಸಂದರ್ಭದಲ್ಲಿ ಶಿವಮೊಗ್ಗದ ಶ್ರೀ ಭಗೀರಥ ಉಪ್ಪಾರ ಯುವಸೇನೆ ವತಿಯಿಂದ ದಿನಸಿ ಕಿಟ್ ವಿತರಿಸಲಾಗಿದೆ.

ದೇಶಾದ್ಯಂತ ಕೊರೊನಾ ಮಹಾಮಾರಿ ಮುಳುವಾಗಿ ಪರಿಣಮಿಸಿದೆ. ಲಾಕ್ ಡೌನ್ ನಿಂದಾಗಿ ಬಹುತೇಕ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡು, ಕಾರ್ಮಿಕರು ಹಾಗೂ ಬಡವರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಜೀವನ ನಡೆಸಲು ಕಷ್ಟಪಡುತ್ತಿದ್ದ ಸಂದರ್ಭದಲ್ಲಿ ಜನರಿಗೆ ಸರ್ಕಾರದ ಜೊತೆ ಸಂಘ-ಸಂಸ್ಥೆಗಳು ನೆರವು ನೀಡುತ್ತಿವೆ.

ಆ ಮೂಲಕ ಯುವಸೇನೆಯ ಸದಸ್ಯರು ಸಂಕಷ್ಟದಲ್ಲಿರುವವರ ನೆರವಿಗೆ ನಿಂತಿದ್ದಾರೆ. ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 200ಕ್ಕೂ ಹೆಚ್ಚು ಕಡುಬಡವರಿಗೆ ದಿನಸಿ ಕಿಟ್​ಗಳನ್ನು ವಿತರಿಸಲಾಯಿತು. ಮಹಾನಗರ ಪಾಲಿಕೆ ಸದಸ್ಯ ಹಾಗೂ ಉಪ್ಪಾರ ಸಮಾಜದ ಮುಖಂಡ ನಾಗರಾಜ್ ಕಂಕಾರಿ ನೇತೃತ್ವದಲ್ಲಿ ಕಿಟ್ ವಿತರಿಸಲಾಯಿತು.

ABOUT THE AUTHOR

...view details