ಕರ್ನಾಟಕ

karnataka

ಅರ್ಚಕರು - ಆಡಳಿತ ಮಂಡಳಿ ಮಧ್ಯೆ ಮಾತಿನ ಚಕಮಕಿ: ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಕೋಲಾಹಲ

By

Published : Oct 16, 2020, 8:52 PM IST

Updated : Oct 16, 2020, 10:25 PM IST

ಪೂಜೆ ವಿಚಾರವಾಗಿ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಆಡಳಿತ ಮಂಡಳಿ ಮತ್ತು ಅರ್ಚಕರ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತ ತಲುಪಿತ್ತು.

Sigandur temple administration and group of priests
ಸಿಗಂದೂರು ದೇವಾಲಯ

ಶಿವಮೊಗ್ಗ: ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಆಡಳಿತ ಮಂಡಳಿ ಹಾಗೂ ಅರ್ಚಕರ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ಇಂದು ಬೆಳಗ್ಗೆ ಚಂಡಿಕ ಹೋಮ ಮಾಡಲು ಅವಕಾಶ ನೀಡಲಿಲ್ಲ ಎಂದು ಪ್ರಧಾನ ಅರ್ಚಕ ಶೇಷಗಿರಿ ಭಟ್ ತಮ್ಮ ಕುಟುಂಬದವರೊಂದಿಗೆ ದೇವಿಯ ಮುಂದೆ ಮೌವವ್ರತ ನಡೆಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಕೆಲವರು ಶೇಷಗಿರಿ ಭಟ್ಟರು ದೇವಾಲಯದಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ವೇಳೆ ಶೇಷಗಿರಿ ಭಟ್ಟರ ಕಡೆಯವರು ಸಹ ಅಲ್ಲಿಗೆ ಬಂದರು. ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದಾಗ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.

ಸ್ಥಳಕ್ಕೆ ಸಾಗರ ಡಿಎಸ್​ಪಿ ವಿನಾಯಕ್ ಭೇಟಿ ನೀಡಿದ್ದಾರೆ. ಸದ್ಯ ದೇವಾಲಯದಲ್ಲಿ ಎಲ್ಲವೂ ಬೂದಿ ಮುಚ್ಚಿದ ಕೆಂಡದಂತಿದೆ.

Last Updated : Oct 16, 2020, 10:25 PM IST

ABOUT THE AUTHOR

...view details