ಕರ್ನಾಟಕ

karnataka

ETV Bharat / city

'ಸಂಚಾರಿ ನಿಯಮ ಪಾಲಿಸಿ ಅಪಘಾತ ತಪ್ಪಿಸಿ'... ಮಕ್ಕಳಿಂದ ಸಂದೇಶ

ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಅವರಿಂದ ಮೋಟಾರ್ ಸೈಕಲ್ ಜಾಥಾಕ್ಕೆ ಚಾಲನೆ. ಸಂಚಾರಿ ನಿಯಮ ಪಾಲಿಸಿ ಅಪಘಾತ ತಪ್ಪಿಸಿ, ಕಡ್ಡಾಯ ಹೆಲ್ಮೆಟ್ ಧರಿಸಿ ಜೀವ ಉಳಿಸಿ ಸಂದೇಶ ಸಾರಿದ ಮಕ್ಕಳು.

By

Published : Jan 18, 2020, 5:12 AM IST

Motorcycle Jatha in Shivamogga
ಮೋಟಾರ್ ಸೈಕಲ್ ಜಾಥಾ

ಶಿವಮೊಗ್ಗ:ಜಿಲ್ಲಾಡಳಿತ, ಸಾರಿಗೆ ಇಲಾಖೆ ಹಮ್ಮಿಕೊಂಡಿದ್ದ ಮೋಟಾರ್ ಸೈಕಲ್ ಜಾಥಾಕ್ಕೆ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಚಾಲನೆ ನೀಡಿದರು.

'ಯುವ ಶಕ್ತಿಯ ಮೂಲಕ ಬದಲಾವಣೆ ತರೋಣ' ಎಂಬ ಘೋಷಣೆಯಡಿ ಕಮಲಾ ನೆಹರೂ ಕಾಲೇಜು ಆವರಣದಿಂದ ಆರಂಭಗೊಂಡ ಈ ಜಾಥಾ ಗೋಪಿ ಸರ್ಕಲ್, ಅಮೀರ್​ ಅಹ್ಮದ್ ವೃತ್ತ, ವೀರಭದ್ರೇಶ್ವರ ಚಿತ್ರಮಂದಿರ ಮಾರ್ಗದ ಮೂಲಕ ಕಾಲೇಜು ಆವರಣಕ್ಕೆ ತೆರಳಿತು.

ಮೋಟಾರ್ ಸೈಕಲ್ ಜಾಥಾ

ಸಂಚಾರಿ ನಿಯಮ ಪಾಲಿಸಿ ಅಪಘಾತ ತಪ್ಪಿಸಿ, ಕಡ್ಡಾಯ ಹೆಲ್ಮೆಟ್ ಧರಿಸಿ ಜೀವ ಉಳಿಸಿ ಎಂಬ ಸಂದೇಶ ಸಾರುವ ಫಲಕಗಳನ್ನು ವಿದ್ಯಾರ್ಥಿಗಳು ಪ್ರದರ್ಶಿದರು.

ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಹೆಚ್.ಟಿ.ಶೇಖರ್, ದೀಪಕ್ ಪ್ರಸಾದ್, ಕಮಲಾ ನೆಹರೂ ಕಾಲೇಜಿನ ಪ್ರಾಂಶುಪಾಲರಾದ ಪಾರ್ವತಮ್ಮ ಹಾಗೂ ಉಪನ್ಯಾಸಕರು ಇದ್ದರು.

ABOUT THE AUTHOR

...view details