ಶಿವಮೊಗ್ಗ: ಜನವರಿ 21 ರಂದು ಹುಣಸೋಡಿನಲ್ಲಿ ನಡೆದ ಜಿಲೆಟಿನ್ ಸ್ಫೋಟ ಪ್ರಕರಣದಲ್ಲಿ ಹಾನಿಗೊಳಗಾದ ಸಂತ್ರಸ್ತರ ಮನೆಗಳ ವಿವರವನ್ನು ಚಾರ್ಜ್ಶೀಟ್ನಲ್ಲಿ ನಮೂದಿಸಬೇಕು ಎಂದು ಬಸವನಗಂಗೂರಿನ ಮಹಿಳೆಯೊಬ್ಬರು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.
ಜಿಲೆಟಿನ್ ಸ್ಪೋಟದ ವೇಳೆ ನಮ್ಮ ಮನೆ ಹಾನಿಗೊಳಗಾಗಿದೆ. ಈ ಕುರಿತು ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮ ಪಂಚಾಯತಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಮನೆಯ ಸರ್ವೆ ನಡೆಸಿ, ಹಾನಿಗೊಳಗಾಗಿರುವ ಕುರಿತು ವರದಿ ಸಲ್ಲಿಸಿಲ್ಲ. ಇದೀಗ ಮನೆ ಬೀಳುವ ಸ್ಥಿತಿ ತಲುಪಿದೆ.