ಕರ್ನಾಟಕ

karnataka

ETV Bharat / city

ಮಲೆನಾಡಿನಲ್ಲಿ ಮಳೆ ಆರ್ಭಟಕ್ಕೆ ಮನೆ ಕುಸಿದು ಮಹಿಳೆ ಬಲಿ - ಅದೃಷ್ಟವಶಾತ್​ ಪಾರು

ಮಲೆನಾಡಿನಲ್ಲಿ ಸುರಿದ ಧಾರಾಕಾರ ಮಳೆಗೆ ಮನೆ ಕುಸಿದು ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

Home collapse lady dead

By

Published : Sep 7, 2019, 6:11 PM IST

ಶಿವಮೊಗ್ಗ:ಮಲೆನಾಡಿನಲ್ಲಿ ಸುರಿದ ಧಾರಾಕಾರ ಮಳೆಗೆ ಜನರು ತಮ್ಮ ಮನೆ-ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಈಗ ಮತ್ತೆ ಹೆಚ್ಚಾದ ವರುಣನ ಅಬ್ಬರದಿಂದಾಗಿ ಮನೆ ಕುಸಿದು ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದ ಮಹಿಳೆಯೊಬ್ಬರು ಅಸುನೀಗಿದ್ದಾರೆ.

ಉಮೇರ್ ಅಜುಂ (31) ಮೃತ ಮಹಿಳೆ. ಸಾವನ್ನಪ್ಪಿದ ಮಹಿಳೆಗೆ ಮೂವರು ಮಕ್ಕಳಿದ್ದಾರೆ. ಈಗವರು ತಬ್ಬಲಿಗಳಾಗಿದ್ದಾರೆ.

ಪತ್ನಿ ಕಳೆದುಕೊಂಡು ರೋದಿಸುತ್ತಿರುವ ಪತಿ ಜಾಫರ್ ಖಾನ್

ನಾಲ್ಕೈದು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದೆ. ಸೆಪ್ಟೆಂಬರ್​ 5ರಂದು ಮನೆ ಕುಸಿದ ಪರಿಣಾಮ ಮಹಿಳೆಯ ತಲೆಗೆ ಗಂಭೀರ ಗಾಯವಾಗಿತ್ತು. ಬಳಿಕ ಉಮೇರ್​ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಆದರಿಂದು ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತಪಟ್ಟಿದ್ದಾರೆ.

ಕುಸಿದ ಮನೆ

ಹಾಗೇ ಮೆನ ಕುಸಿದ ಸಂದರ್ಭದಲ್ಲಿ ಆಕೆಯ ಪತಿ ಜಾಫರ್ ಖಾನ್ ಅವರ ಕಾಲಿಗೂ ಗಾಯವಾಗಿತ್ತು. ಅದೃಷ್ಟಾವಶಾತ್​ ಮೂವರು ಮಕ್ಕಳಿಗೆ ಯಾವುದೇ ರೀತಿ ತೊಂದರೆಯಾಗಿರಲಿಲ್ಲ. ಮನೆ ಮತ್ತು ಮಡದಿ ಕಳೆದುಕೊಂಡು ಮೂವರು ಮಕ್ಕಳೊಂದಿಗೆ ತಬ್ಬಲಿಯಾದ ಕುಟುಂಬಕ್ಕೆ ಸರ್ಕಾರ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ABOUT THE AUTHOR

...view details