ಕರ್ನಾಟಕ

karnataka

ತುರ್ತು ಪರಿಸ್ಥಿತಿಯಂತಹ ಕರಾಳ ದಿನ ಇಡೀ ಪ್ರಪಂಚಕ್ಕೆ ಮತ್ತೊಮ್ಮೆ ಬಾದಿರಲಿ - ಸಚಿವ ಕೆ‌ಎಸ್ ಈಶ್ವರಪ್ಪ

By

Published : Jun 25, 2021, 2:19 AM IST

ತುರ್ತು ಪರಿಸ್ಥಿತಿಗೆ 45 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ತುರ್ತು ಪರಿಸ್ಥಿತಿಯ ಕರಾಳ ದಿನಗಳ ಮನವರಿಕೆ ಕಾರ್ಯಕ್ರಮದಲ್ಲಿ ಸಚಿವ ಈಶ್ವರಪ್ಪ ಭಾಗವಹಿಸಿದ್ದರು.

emergency period will not get back again in world - k s eshwarappa
ತುರ್ತು ಪರಿಸ್ಥಿತಿಯಂತಹ ಕರಾಳದಿನ ಇಡೀ ಪ್ರಪಂಚಕ್ಕೆ ಮತ್ತೊಮ್ಮೆ ಬಾದಿರಲಿ - ಸಚಿವ ಕೆ‌ಎಸ್ ಈಶ್ವರಪ್ಪ

ಶಿವಮೊಗ್ಗ: ಇಡೀ ಪ್ರಪಂಚದಲ್ಲಿ ತುರ್ತು ಪರಿಸ್ಥಿತಿಯಂತಹ ಕರಾಳ ದಿನಗಳು ಮತ್ತೊಮ್ಮೆ ಬಾರದಿರಲಿ ಎಂದು ಗ್ರಾಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ. ತುರ್ತು ಪರಿಸ್ಥಿತಿಗೆ 45 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಬಿಜೆಪಿ ಶಿವಮೊಗ್ಗದಲ್ಲಿ ಹಮ್ಮಿಕೊಂಡಿದ್ದ ತುರ್ತು ಪರಿಸ್ಥಿತಿಯ ಕರಾಳ ದಿನಗಳ ಮನವರಿಕೆ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.

ಇಂದಿರಾಗಾಂಧಿಯವರು ಅಧಿಕಾರ ದುರುಪಯೋಗ ಮಾಡಿಕೊಳ್ಳುವ ಮೂಲಕ ತುರ್ತು ಪರಿಸ್ಥಿತಿ ಜಾರಿಗೆ ತಂದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಯಿತು. ತುರ್ತು ಪರಿಸ್ಥಿತಿಯು ದೇಶದ ಎರಡನೇ ಸ್ವತಂತ್ರ ಹೋರಾಟ. ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಆಗೋಕೆ ತುರ್ತು ಪರಿಸ್ಥಿತಿ ಬುನಾದಿಯಾಗಿ ಪರಿಣಮಿಸಿತು ಎಂದು ಹೇಳಿದರು.

ನಾವು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲು ವಾಸ ಅನುಭವಿಸುತ್ತಿದ್ದಾಗ ನಮ್ಮ ರಕ್ತ ಕುದಿಯುತ್ತಿತ್ತು. ದೇಶದಲ್ಲಿ ಸ್ವತಂತ್ರ ಹರಣ ಮಾಡಿದ ಕಾಂಗ್ರೆಸ್ ಉಳಿಯಬಾರದು ಎಂದು ಅಂದುಕೊಂಡಿದ್ದೇವು ಎಂದು ಸಚಿವ ಈಶ್ವರಪ್ಪ ಹೇಳಿದರು.

ABOUT THE AUTHOR

...view details