ಕರ್ನಾಟಕ

karnataka

By

Published : Oct 4, 2019, 6:29 PM IST

ETV Bharat / city

ತಾಯಿ ಕಣ್ಮುಂದೆಯೇ ಮಗಳ ಅಪಹರಣ...ಸಿನಿಮೀಯ ರೀತಿಯಲ್ಲಿ ಚೇಸ್​ ಮಾಡಿ ರಕ್ಷಿಸಿದ ತಂದೆ!

ಪತ್ನಿಯೊಂದಿಗೆ ಸಮೀಪದ ದೇವಾಲಯಕ್ಕೆ ಹೋಗುತ್ತಿದ್ದ ಮಗಳನ್ನು ಅಪಹರಿಸಿದ ಕಿಡಿಗೇಡಿಗಳಿಂದ ತಂದೆ ತನ್ನ ಕಡೆಯವರೊಂದಿಗೆ ಸಿನಿಮೀಯಾ ರೀತಿಯಲ್ಲಿ ಚೇಸ್​ ಮಾಡಿ ಮಗಳನ್ನು ರಕ್ಷಿಸಿದ್ದಾರೆ.

daughter-kidnap-dot-dot-dot-father-save

ಶಿವಮೊಗ್ಗ:ಇಂದು ಮಧ್ಯಾಹ್ನ ತಾಯಿ ಜೊತೆ ಸಮೀಪದ ದೇವಾಲಯಕ್ಕೆ ಹೋಗುತ್ತಿದ್ದ ಮಗಳಿಗೆ ಲಾಂಗು ಮಚ್ಚು ತೋರಿಸಿ ಕಿಡ್ನಾಪ್​ ಮಾಡಿದ ಕಿಡಿಗೇಡಿಗಳನ್ನು ಚೇಸ್​ ಮಾಡಿದ ತಂದೆ ತಮ್ಮ ಮಗಳನ್ನು ಸಿನಿಮೀಯ ರೀತಿಯಲ್ಲಿ ಕಾಪಾಡಿದ್ದಾರೆ.

ಈ ಘಟನೆ ಯಡೂರು ಗ್ರಾಮದಲ್ಲಿ ನಡೆದಿದೆ. ಯಡೂರಿನ ಶ್ರೀಧರ್ ಎಂಬವರ ಮಗಳು ತನ್ನ ತಾಯಿಯೊಂದಿಗೆ ದೇವಾಲಯಕ್ಕೆ ಹೋಗುತ್ತಿದ್ದರು. ಏಕಾಏಕಿ ರಿಡ್ಜ್ ಕಾರಿನಲ್ಲಿ ಬಂದ ತೀರ್ಥಹಳ್ಳಿಯ ಕುರುವಳ್ಳಿ ನಾಗರಾಜ್ ಹಾಗೂ ಆತನ ಸ್ನೇಹಿತರು ಕಾರಿನಲ್ಲಿ ಯುವತಿಯನ್ನು ಅಪಹರಿಸಿಕೊಂಡು ಪರಾರಿಯಾದರು. ಈ ವೇಳೆ ಮಗಳನ್ನು ರಕ್ಷಿಸಲು ಮುಂದಾದ ತಾಯಿಯನ್ನೂ ತಳ್ಳಿ ಎಳೆದೊಯ್ದರು.

ಕೃತ್ಯಕ್ಕೆ ಬಳಸಿದ ಲಾಂಗ್

ಈ ವಿಚಾರ ತಿಳಿದ ಯುವತಿ ತಂದೆ ಮತ್ತು ತನ್ನ ಕಡೆಯವರು ಆ ಕಾರನ್ನು ಸಿನಿಮೀಯಾ ರೀತಿಯಲ್ಲಿ ಬೆನ್ನಟ್ಟಿದ ಶ್ರೀಧರ್​ ಕಡೆಯವರು ತೀರ್ಥಹಳ್ಳಿಯ ಮುತ್ತೂರು ಗ್ರಾಮದ ಬಳಿ ಅಪಹರಣಕಾರರ ಕಾರನ್ನು ಅಡ್ಡಗಟ್ಟಿದರು. ತಕ್ಷಣ ಕುರುವಳ್ಳಿ ನಾಗರಾಜ್, ಆತನ ಸ್ನೇಹಿತರು ಕಾರನ್ನು ಹಾಗೂ ಯುವತಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಯುವತಿಯನ್ನು ವಾಪಸ್ ಕರೆ ತರಲಾಗಿದ್ದು, ಕುರುವಳ್ಳಿ ನಾಗರಾಜ್ ನ ವಿರುದ್ದ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಾಗರಾಜ್ ಹಾಗೂ‌ ಶ್ರೀಧರ್​ ಮಗಳು ಪ್ರೀತಿಸುತ್ತಿದ್ದರು. ನಾಗರಾಜ ಶೋಕಿವಾಲನಾಗಿದ್ದ. ಈತ ಹುಡುಗಿಯರೊಂದಿಗೆ ಅನೈತಿಕ ವರ್ತಿಸಿ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ. ಇದನ್ನು ತಿಳಿದ ಯುವತಿ ಆತನ ಸಹವಾಸ ಬಿಟ್ಟಿದ್ದಳು. ಇದರಿಂದ ಕುಪಿತಗೊಂಡ ನಾಗರಾಜ್​ ತನ್ನನ್ನು ಪ್ರೀತಿಸಿ ಮೋಸ ಮಾಡ್ತೀಯಾ ಎಂದು ಅಪಹರಿಸಿದ್ದಾನೆ ಎಂದು ಪೊಲೀಸ್​ ಮೂಲಗಳು ಹೇಳಿವೆ.

ABOUT THE AUTHOR

...view details