ಕರ್ನಾಟಕ

karnataka

ETV Bharat / city

ಗೂಂಡಾಗಿರಿಯನ್ನು ಬಿಜೆಪಿ ಸರ್ಕಾರ ಸಹಿಸಲ್ಲ: ಸಚಿವ ಕೆ.ಎಸ್.ಈಶ್ವರಪ್ಪ

ಭದ್ರಾವತಿಯಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ನಮ್ಮ ಪಕ್ಷದ ಜಿಲ್ಲಾ ಕಾರ್ಯದರ್ಶಿ ಧರ್ಮಪ್ರಸಾದ್ ಅವರ ತಂಡ ರನ್ನರ್ ಆಪ್ ಆಗಿತ್ತು. ಈ ವೇಳೆ ಸಂಗಮೇಶ್ ಬೆಂಬಲಿಗರು ದಾಳಿ ನಡೆಸಿ ಹಲ್ಲೆ ಮಾಡಿದ್ದಾರೆ‌. ಬಿಜೆಪಿ ಸರ್ಕಾರ ಈ ರೀತಿಯ ಗೂಂಡಾ ವರ್ತನೆಯನ್ನು ಸಹಿಸಲ್ಲ. ಹಲ್ಲೆ ನಡೆಸಿದವರು ಶರಣಾಗುವುದು ಒಳ್ಳೇದು ಎಂದು ಸಚಿವ ಈಶ್ವರಪ್ಪ ಹೇಳಿದರು.

By

Published : Mar 2, 2021, 5:46 PM IST

the-bjp-government-is-not-tolerant-of-hooliganism-minister-eshwarappa-angry
ಈಶ್ವರಪ್ಪ ಗರಂ

ಶಿವಮೊಗ್ಗ:ಭದ್ರಾವತಿಯಲ್ಲಿ ಬಿಜೆಪಿ ಕಾರ್ಯದರ್ಶಿ ಮೇಲೆ ನಡೆದ ಹಲ್ಲೆ ಖಂಡನೀಯ. ಇದನ್ನು ಸರ್ಕಾರ ಸಹಿಸುವುದಿಲ್ಲ ಎಂದು ಸಚಿವ ಈಶ್ವರಪ್ಪ ಎಚ್ಚರಿಸಿದ್ದಾರೆ.

ಭದ್ರಾವತಿಯಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ನಮ್ಮ ಪಕ್ಷದ ಜಿಲ್ಲಾ ಕಾರ್ಯದರ್ಶಿ ಧರ್ಮಪ್ರಸಾದ್ ಅವರ ತಂಡ ರನ್ನರ್ ಆಪ್ ಆಗಿತ್ತು. ಈ ವೇಳೆ ಸಂಗಮೇಶ್ ಬೆಂಬಲಿಗರು ದಾಳಿ ನಡೆಸಿ ಹಲ್ಲೆ ಮಾಡಿದ್ದಾರೆ‌. ಈ ಘಟನೆಯಿಂದ ನನಗೆ ನೋವಾಗಿದೆ. ಯಾರು ಹಲ್ಲೆ ನಡೆಸಿದ್ರೋ ಅವರ ಪರವಾಗಿ ಶಾಸಕ ಸಂಗಮೇಶ್ ನಿಂತಿದ್ದು ಒಳ್ಳೆಯ ಬೆಳವಣಿಗೆ ಅಲ್ಲ. ಬಿಜೆಪಿ ಸರ್ಕಾರ ಇಂಥ ಗೂಂಡಾ ವರ್ತನೆಯನ್ನು ಸಹಿಸಲ್ಲ. ಹಲ್ಲೆ ನಡೆಸಿದವರು ಶರಣಾಗುವುದು ಒಳ್ಳೆಯದು ಎಂದು ಎಚ್ಚರಿಕೆ ನೀಡಿದರು.

ಸಚಿವ ಈಶ್ವರಪ್ಪ ಹೇಳಿಕೆ

ಘಟನೆ ಕುರಿತು ಸಿಎಂ ಗಮನ ಹರಿಸಿದ್ದಾರೆ‌. ಗೂಂಡಾಗಿರಿ ನಡೆಸದಂತೆ ನಾನು ಸಂಗಮೇಶ್ ಅವರಲ್ಲಿ ಮನವಿ ಮಾಡುವೆ. ಹೀಗೆ ಮಾಡುವವರಿಗೆ ಬೆಂಬಲ ನೀಡಬೇಡಿ. ಈ ಹಿಂದೆ ತಹಶೀಲ್ದಾರರ ಘಟನೆಯಿಂದ ಹಿಂದಿನ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿತ್ತು ಎಂದರು.

'ದೇಶದ ಜನ ಕಾಂಗ್ರೆಸ್​ ಹೊರ ಹಾಕಿದ್ದಾರೆ'

ರಾಹುಲ್ ಗಾಂಧಿ ಬಗ್ಗೆ ಏನು ಹೇಳಬೇಕು ಎಂದು ನನಗೆ ತಿಳಿಯುತ್ತಿಲ್ಲ. ರಾಹುಲ್ ಗಾಂಧಿ ಅವರ ಅಮ್ಮ, ಅಪ್ಪ, ಅಜ್ಜಿ, ಅಜ್ಜ, ಮುತ್ತಜ್ಜ ಅದೇ ಕಾಂಗ್ರೆಸ್ ಆಗಿದೆ. ಈಗ ದೇಶದ ಜನ ಕಾಂಗ್ರೆಸ್ ಪಕ್ಷ, ಅವರ ಕುಟುಂಬವನ್ನು ಹೊರಗೆ ಹಾಕಿದ್ದಾರೆ ಎಂದು ಟೀಕಿಸಿದರು.

ABOUT THE AUTHOR

...view details