ಕರ್ನಾಟಕ

karnataka

By

Published : Mar 9, 2022, 7:25 AM IST

Updated : Mar 9, 2022, 8:48 AM IST

ETV Bharat / city

ಶಿವಮೊಗ್ಗ: ಹಣಕಾಸಿನ ವಿಚಾರವಾಗಿ ವ್ಯಕ್ತಿ ಮೇಲೆ ಚಾಕು ಇರಿತ!

ಹಣಕಾಸಿನ ವಿಚಾರವಾಗಿ ಶಿವಮೊಗ್ಗದ ಶಂಕರಮಠ ರಸ್ತೆಯಲ್ಲಿ ದಸ್ತಗಿರ್ ಎಂಬಾತ ಪಾಚಾಖಾನ್​ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.

assault on man with a knife in shivamogga
ಹಣಕಾಸಿನ ವಿಚಾರವಾಗಿ ವ್ಯಕ್ತಿ ಮೇಲೆ ಚಾಕು ಇರಿತ

ಶಿವಮೊಗ್ಗ: ಹಣಕಾಸಿನ ವಿಚಾರವಾಗಿ ಆರಂಭಗೊಂಡ ಜಗಳ ಚಾಕು ಇರಿತದವರೆಗೂ ಬಂದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಶಂಕರಮಠ ರಸ್ತೆಯಲ್ಲಿ ದಸ್ತಗಿರ್ ಎಂಬಾತ ಪಾಚಾಖಾನ್​ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಆರ್​ಎಂಎಲ್‌ ನಗರದ ದಸ್ತಗಿರ್​ಗೂ ಹಾಗೂ ಬಾಪೂಜಿ ನಗರದ ಪಾಚಾಖಾನ್​ಗೂ ಹಣಕಾಸಿನ ವಿಚಾರವಾಗಿ ಗಲಾಟೆ ನಡೆದಿದೆ. ನಂತರ ದಸ್ತಗಿರ್​ನಿಂದ ಹಲ್ಲೆ ನಡೆದಿದ್ದು, ಪಾಚಾಖಾನ್​ನ ಎದೆ, ಮುಖದ ಮೇಲೆ ಚಾಕುವಿನಿಂದ ಇರಿದಿದ್ದಾನೆ.

ವ್ಯಕ್ತಿ ಮೇಲೆ ಚಾಕು ಇರಿತ!

ಇದನ್ನೂ ಓದಿ:ಆರ್ಥಿಕ ನಿರ್ಬಂಧ ಬಳಿಕ ಮತ್ತೊಂದು ಶಾಕ್‌; ರಷ್ಯಾದಿಂದ ತೈಲ, ಅನಿಲ ಆಮದಿಗೆ ಅಮೆರಿಕ ನಿಷೇಧ

ಗಂಭೀರವಾಗಿ ಗಾಯಗೊಂಡಿರುವ ಪಾಚಾಖಾನ್​ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Mar 9, 2022, 8:48 AM IST

ABOUT THE AUTHOR

...view details