ಕರ್ನಾಟಕ

karnataka

By

Published : Dec 12, 2021, 11:01 PM IST

ETV Bharat / city

ಶಿವಮೊಗ್ಗ: ಶರಾವತಿ ಹಿನ್ನೀರಿನಲ್ಲಿ ಅಡಕೆ ಸಾಗಿಸುವಾಗ ಮುಳುಗಿದ ತೆಪ್ಪ.. ರೈತ ಸಾವು, ಇನ್ನೋರ್ವ ಪಾರು

ಶರಾವತಿ ಹಿನ್ನೀರಿನಲ್ಲಿ ಅಡಕೆ ಸಾಗಿಸುತ್ತಿದ್ದ ತೆಪ್ಪವೊಂದು ಮುಳುಗಿ ರೈತನೊಬ್ಬ ಮೃತಪಟ್ಟರೆ, ಇನ್ನೊಬ್ಬ ರೈತ ಅದೃಷ್ಟವಶಾತ್​ ಪಾರಾದ ಘಟನೆ ಹೊಸನಗರ ತಾಲೂಕು ನಿಟ್ಟೂರು ಸಮೀಪದ ಕೋಸ್ನಾಡಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

farmers death
ತೆಪ್ಪ ಮುಳುಗಿ ರೈತ ಸಾವು

ಶಿವಮೊಗ್ಗ:ಶರಾವತಿ ಹಿನ್ನೀರಿನಲ್ಲಿ ಅಡಕೆ ಸಾಗಿಸುತ್ತಿದ್ದ ತೆಪ್ಪವೊಂದು ಮುಳುಗಿ ಓರ್ವ ರೈತ ಮೃತಪಟ್ಟಿದ್ದು, ಇನ್ನೊಬ್ಬ ರೈತ ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾದ ಘಟನೆ ಹೊಸನಗರ ತಾಲೂಕು ನಿಟ್ಟೂರು ಸಮೀಪದ ಕೋಸ್ನಾಡಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಹೊಸನಗರ ತಾಲೂಕಿನ ಸ್ವಾಮಿ ಮಾವಿನಗುಡ್ಡೆ(50) ಹಿನ್ನೀರಿಲ್ಲಿ ಮುಳುಗಿ ಮೃತಪಟ್ಟ ರೈತ. ನಾರಾಯಣ ಚಂಗೋಳ್ಳಿ ಪ್ರಾಣಾಪಾಯದಿಂದ ಪಾರಾದ ರೈತ‌.

ಇದನ್ನೂ ಓದಿ: ಅಬ್ಬಬ್ಬಾ!! ಎಂಥಾ ಧೈರ್ಯ.. ಮಕ್ಕಳಿಗೆ ಆಟಿಕೆಯಾದ ಜೀವಂತ ಹಾವುಗಳು.. ವಿಡಿಯೋ ವೈರಲ್​​

ಶರಾವತಿ ಹಿನ್ನೀರಿನಲ್ಲಿ ತೆಪ್ಪದಲ್ಲಿ ಅಡಕೆ ತುಂಬಿಕೊಂಡು ಬರುವಾಗ ಗಾಳಿಯ ರಭಸಕ್ಕೆ ತೆಪ್ಪ ಮಗುಚಿಬಿದ್ದಿದೆ. ಈ ವೇಳೆ ತೆಪ್ಪದಲ್ಲಿದ್ದ ಇಬ್ಬರು ರೈತರಲ್ಲಿ ಸ್ವಾಮಿ ಮಾವಿನಗಡ್ಡೆ ನೀರಿನಲ್ಲಿ ಮುಳುಗಿದ್ದಾರೆ. ಇನ್ನೊಬ್ಬ ರೈತ ನಾರಾಯಣ ಚಂಗೋಳ್ಳಿ ಈಜಾಡಿಕೊಂಡು ದಡ ತಲುಪಿದ್ದಾರೆ.

ಹಿನ್ನೀರಿನಲ್ಲಿ ಮುಳುಗಿದ ರೈತ ಸ್ವಾಮಿ ಪತ್ತೆಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details