ಕರ್ನಾಟಕ

karnataka

ETV Bharat / city

ನೀರಿಗೆ ಬಿದ್ದು ಹಾಳಾಯ್ತು ಸಾಲ ಮಾಡಿ ಕೊಂಡುಕೊಂಡಿದ್ದ ಮೊಬೈಲ್.. ಮನನೊಂದ ಯುವಕ ಆತ್ಮಹತ್ಯೆ! - ಮೊಬೈಲ್​ ಹಾಳಾಗಿದ್ದಕ್ಕೆ ಯುವಕ ಆತ್ಮಹತ್ಯೆ

ಮೊಬೈಲ್​ ಹಾಳಾಗಿದ್ದಕ್ಕೆ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಜನತಾ ಕಾಲೋನಿಯಲ್ಲಿ ನಡೆದಿದೆ.

young man committed suicide at Mysore
ಮೊಬೈಲ್​ ಹಾಳಾಗಿದ್ದಕ್ಕೆ ಯುವಕ ಆತ್ಮಹತ್ಯೆ

By

Published : Jan 6, 2022, 1:46 PM IST

ಮೈಸೂರು: ಸಾಲ ಮಾಡಿ ಕೊಂಡುಕೊಂಡಿದ್ದ ಮೊಬೈಲ್​​ ನೀರಿನಲ್ಲಿ ಬಿದ್ದು ಹಾಳಾಗಿದ್ದಕ್ಕೆ ಮನನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಜನತಾ ಕಾಲೋನಿಯಲ್ಲಿ ನಡೆದಿದೆ. ಮಹೇಂದ್ರ (22)ಆತ್ಮಹತ್ಯೆಗೆ ಶರಣಾದ ಯುವಕ.

ಮೊಬೈಲ್​ ಹಾಳಾಗಿದ್ದಕ್ಕೆ ಯುವಕ ಆತ್ಮಹತ್ಯೆ

ಈತ ಚಿಕನ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಮೊಬೈಲ್ ಗೇಮ್​ಗಳನ್ನು ಹೆಚ್ಚಾಗಿ ಆಡುತ್ತಾ ಕಾಲ ಕಳೆಯುತ್ತಿದ್ದ. ಸಾಲ ಮಾಡಿ ಮೊಬೈಲ್ ತೆಗೆದುಕೊಂಡಿದ್ದ. ಆದರೆ ಈತನ ಮೊಬೈಲ್ ಆಕಸ್ಮಿಕವಾಗಿ ನೀರಿಗೆ ಬಿದ್ದು ಹಾಳಾಗಿದ್ದು, ಅದನ್ನು ರಿಪೇರಿ ಮಾಡಲು ಹೆಚ್ಚಿನ ಹಣ ಬೇಕಾಗಿತ್ತು.

ತನ್ನಲ್ಲಿ ಹಣವಿಲ್ಲ, ಸಾಲ ಕೇಳಿದರೆ ಯಾರೂ ಕೊಡುವುದಿಲ್ಲ ಎಂದು ಮಾನಸಿಕವಾಗಿ ನೊಂದ ಯುವಕ ಮಹೇಂದ್ರ ಮನೆಯ ಪಕ್ಕದಲ್ಲಿ ಇರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಮಾಧುಸ್ವಾಮಿ ಕೊರಿಯಾದ ಕಿಂಗ್​ಪಿನ್​ ಇದ್ದಂಗೆ: ಮಾಧ್ಯಮಗೋಷ್ಟಿಯಲ್ಲೇ ಸಂಸದ ಬಸವರಾಜು ಗುಸು-ಗುಸು!

ಈ ಸಂಬಂಧ ಸ್ಥಳಕ್ಕೆ ಆಗಮಿಸಿದ ಆಲನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details