ಕರ್ನಾಟಕ

karnataka

By

Published : Dec 25, 2019, 7:44 AM IST

ETV Bharat / city

ವಿಧವೆಯರನ್ನೇ ಟಾರ್ಗೆಟ್​​ ಮಾಡ್ತಿದ್ದ ಖದೀಮ ಮೈಸೂರಲ್ಲಿ ಅರೆಸ್ಟ್​

ಅಮಾಯಕ ವಿಧವೆಯರನ್ನೇ ಶಾದಿ ಡಾಟ್ ಕಾಂ ಮೂಲಕ ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ, ಅವರಿಂದ ಚಿನ್ನಾಭರಣ, ನಗದು ಪಡೆದುಕೊಂಡು ಪರಾರಿಯಾಗುತ್ತಿದ್ದ ಖದೀಮನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

arrest
arrest

ಮೈಸೂರು: ಅಮಾಯಕ ವಿಧವೆಯರನ್ನ ಶಾದಿ ಡಾಟ್ ಕಾಂ ನಲ್ಲಿ ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ, ಅವರಿಂದ ಚಿನ್ನಾಭರಣ, ನಗದು ದೋಚುತ್ತಿದ್ದ ಖದೀಮನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ತಮಿಳುನಾಡಿನ ಕೊಯಿಬತ್ತೂರು ನಿವಾಸಿ ಯುವರಾಜ್ ಅಲಿಯಾಸ್​ ವಿನಿತ್‌ರಾಜ್ (46) ಬಂಧಿತ ಆರೋಪಿ. ಮೈಸೂರಿನ ವಿಧವೆ ಮಹಿಳೆವೋರ್ವರಿಗೆ ವಿನಿತ್‌ರಾಜ್ ಫೋನ್ ಮಾಡಿ, ಪರಿಚಯ ಮಾಡಿಕೊಂಡಿದ್ದ. ಅವರಿಗೆ ಮದುವೆ ಭರವಸೆ ನೀಡಿದ್ದ. ಬಳಿಕ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಅನುಮಾನಗೊಂಡ ಮಹಿಳೆ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಕುರಿತು ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನಿಂದ 80 ಸಾವಿರ ರೂಪಾಯಿ ಚಿನ್ನದ ಸರ, ಒಂದು ಮೊಬೈಲ್, ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ABOUT THE AUTHOR

...view details