ಕರ್ನಾಟಕ

karnataka

By

Published : Jun 16, 2019, 10:01 AM IST

ETV Bharat / city

ದೇವರಾಜ ಮಾರುಕಟ್ಟೆ ಕೆಡವಲು ಕೋರ್ಟ್​ ಆದೇಶಿಸಿಲ್ಲ... ಫೇಸ್​ಬುಕ್​ನಲ್ಲಿ ಯದುವೀರ್​ ಸುದೀರ್ಘ ಪೋಸ್ಟ್​

ಪಾರಂಪರಿಕ ಕಟ್ಟಡವಾದ ಮೈಸೂರಿನ ದೇವರಾಜ ಮಾರುಕಟ್ಟೆ ಕೆಡವುವ ವಿಚಾರವಾಗಿ 'ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್' ಅವರು ಫೇಸ್‌ಬುಕ್​ನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದು, ಅದರ ಉಳಿವಿಗೆ ಚಿಂತಿಸುವಂತೆ ತಿಳಿಸಿದ್ದಾರೆ.

ಪಾರಂಪರಿಕ ಕಟ್ಟಡ

ಮೈಸೂರು: ಪಾರಂಪರಿಕ ಕಟ್ಟಡವಾದ ದೇವರಾಜ ಮಾರುಕಟ್ಟೆ ಕೆಡವುವ ವಿಚಾರವಾಗಿ ಬೇಸರಗೊಂಡಿರುವ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಕೋರ್ಟ್​ ಆದೇಶದವನ್ನು ಸ್ಪಷ್ಟಪಡಿಸಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ದೇವರಾಜ ಮಾರುಕಟ್ಟೆ ಕಟ್ಟಡವನ್ನು ಕೆಡವಕಲು ಚಿಂತಿಸಿತ್ತು. ಇದಕ್ಕೆ ಸಾರ್ವಜನಿಕವಾಗಿ ವಿರೋಧ ವ್ತಕ್ತಪಡಿಸಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನ್ಯಾಯಾಲಯದ ಆದೇಶವನ್ನ ತಪ್ಪಾಗಿ ಅರ್ಥೈಸಲಾಗಿದೆ. ಹೈಕೋರ್ಟ್ ದೇವರಾಜ ಮಾರುಕಟ್ಟೆಯನ್ನ ಕೆಡವಲು ಆದೇಶಿಸಿಲ್ಲ ಎಂಬ ಮಾಹಿತಿಯ ಮೂಲಕ ಸುದೀರ್ಘವಾಗಿ ಬರೆದಿರುವ ಅವರು, ಬದಲಿಗೆ ಅದರ ಸಂರಕ್ಷಣೆ ಮಾಡಲು ಚಿಂತನೆ ಮಾಡಿ ಎಂದು ಹೇಳಿದ್ದಾರೆ.

ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಈ ಕುರಿತು ಆಕ್ಷೇಪ

ನಾನು ದೇವರಾಜ ಮಾರುಕಟ್ಟೆ ಹಾಗೂ ಲ್ಯಾಂಡ್ಸ್‌ಡೌನ್ ಕಟ್ಟಡಗಳಿಗೆ ಭೇಟಿ ನೀಡಿದ್ದೇನೆ. ಅವುಗಳನ್ನ ಸಂರಕ್ಷಣೆ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ. ಎಲ್ಲರು ಪಾರಂಪರಿಕ ಕಟ್ಟಡಗಳನ್ನ ಉಳಿಸಲು ಪ್ರಯತ್ನಿಸೋಣ ಎಂದು ಬರೆದುಕೊಂಡಿದ್ದಾರೆ.

ಪಾರಂಪರಿಕ ಕಟ್ಟಡಗಳನ್ನ ಉಳಿಸಲು ಪ್ರಯತ್ನಿಸೋಣ

For All Latest Updates

TAGGED:

ABOUT THE AUTHOR

...view details