ಕರ್ನಾಟಕ

karnataka

By

Published : Apr 24, 2021, 1:36 PM IST

ETV Bharat / city

ವೀಕೆಂಡ್ ಕರ್ಫ್ಯೂಗೆ ಸಾಂಸ್ಕೃತಿಕ ನಗರಿ ಸ್ತಬ್ಧ: ಸಿಟಿ ರೌಂಡ್ಸ್ ಹಾಕಿದ ಡಿಸಿಪಿ

ಕೊರೊನಾ ನಿಯಂತ್ರಣಕ್ಕೆ ರಾಜ್ಯಾದ್ಯಂತ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ.‌ ಈ ನಿಟ್ಟಿನಲ್ಲಿ ಡಿಸಿಪಿ ಡಾ.ಪ್ರಕಾಶಗೌಡ, ಮೈಸೂರು ಸಿಟಿ ರೌಂಡ್ಸ್​ ಹೊಡೆದು ಪರಿಶೀಲನೆ ನಡೆಸಿದರು.

Mysore
ವೀಕೆಂಡ್ ಕರ್ಫ್ಯೂಗೆ ಸಾಂಸ್ಕೃತಿಕ ನಗರಿ ಸ್ತಬ್ಧ

ಮೈಸೂರು: ವೀಕೆಂಡ್ ಕರ್ಫ್ಯೂಗೆ ಸಾಂಸ್ಕೃತಿಕ ನಗರಿ ಸಂಪೂರ್ಣ ಸ್ತಬ್ಧವಾಗಿದ್ದು, ನಗರದ ಪ್ರಮುಖ ರಸ್ತೆಗಳು ವಾಹನಗಳಿಲ್ಲದೇ ಬಿಕೋ ಎನ್ನುತ್ತಿವೆ.

ವೀಕೆಂಡ್ ಕರ್ಫ್ಯೂಗೆ ಸಾಂಸ್ಕೃತಿಕ ನಗರಿ ಸ್ತಬ್ಧ

ಬೆಳಗ್ಗೆ 6 ಗಂಟೆಯಿಂದ 10ರವರೆಗೆ ಅಗತ್ಯ ವಸ್ತುಗಳನ್ನು ಕೊಳ್ಳಲು ಅವಕಾಶ ನೀಡಲಾಗಿತ್ತು. ಆ ಸಂದರ್ಭದಲ್ಲಿ ಜನರು ತಮ್ಮ - ತಮ್ಮ ಬಡಾವಣೆಗಳ ಹತ್ತಿರ ಅಗತ್ಯ ವಸ್ತುಗಳನ್ನು ಖರೀದಿಸಿ ಮನೆ ಸೇರಿದ್ದು, ದೇವರಾಜ ಮಾರುಕಟ್ಟೆ ಸೇರಿದಂತೆ ಇತರ ಮಾರುಕಟ್ಟೆಗಳತ್ತ ಜನರು ಸುಳಿದೇ ಇಲ್ಲ.

ಇನ್ನು, ಡಿಸಿಪಿ ಡಾ.ಪ್ರಕಾಶಗೌಡ ಅವರು ಸಿಟಿ ರೌಂಡ್ಸ್​ ಹೊಡೆದು ವಾರಾಂತ್ಯದ ಕರ್ಫ್ಯೂ ಬಗ್ಗೆ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಮ ಉಲ್ಲಂಘನೆ ಮಾಡಿದರೆ ಪ್ರಕರಣ ದಾಖಲಿಸಲಾಗುವುದು. ಈಗಾಗಲೇ ಉಲ್ಲಂಘನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಾಗಿದೆ.

ಅನಗತ್ಯವಾಗಿ ಓಡಾಡುವವರ ಮೇಲೆ ಕಣ್ಣಿಡಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಅಗತ್ಯ ವಸ್ತುಗಳ ಮಾರಾಟ ಹಾಗೂ ವೈದ್ಯಕೀಯ ಸೇವೆಗಳಿಗೆ ಅವಕಾಶ ನೀಡಲಾಗಿದೆ ಎಂದರು.

ಓದಿ:ಅಣ್ಣನ ಮದುವೆಯಲ್ಲಿ ಅಪ್ರಾಪ್ತೆಯೊಂದಿಗೆ ತಮ್ಮನ ಮದುವೆಗೆ ಸಿದ್ದತೆ!

ABOUT THE AUTHOR

...view details