ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿ ಹಿಂದಿ ಹೇರಿಕೆ ಬೇಡ : ವಾಟಾಳ್ ನಾಗರಾಜ್

ಹಿಂದಿ ಹೇರಿಕೆ ಮಾಡಿದ್ರೆ ರಾಜ್ಯಾದ್ಯಂತ ತೀವ್ರ ಹೋರಾಟ ಮಾಡಲಾಗುವುದು. ಕೇಂದ್ರದಿಂದ ಪ್ರಾದೇಶಿಕ ಭಾಷೆಗಳನ್ನು ತುಳಿಯುವ ಹುನ್ನಾರ ನಡೆಸಲಾಗುತ್ತಿದೆ. ಹಿಂದಿಯಿಂದಾಗಿ ಕರ್ನಾಟಕಕ್ಕೆ ಅಪಾಯ ಇದೆ. ಕೂಡಲೇ ರಾಜ್ಯ ಸರ್ಕಾರ ಹಿಂದಿಯನ್ನು ತಿರಸ್ಕರಿಸಬೇಕು. ಲೋಕಸಭಾ ಸದಸ್ಯರು ಹಿಂದಿಯನ್ನು ವಿರೋಧಿಸಬೇಕು. ಕರ್ನಾಟಕದಿಂದ ಹಿಂದಿಯನ್ನು ತೊಲಗಿಸಬೇಕು ಎಂದು ಒತ್ತಾಯಿಸಿದರು..

By

Published : Apr 10, 2022, 4:46 PM IST

Vatal Nagaraj
ವಾಟಾಳ್ ನಾಗರಾಜ್

ಮೈಸೂರು: ಕೇಂದ್ರ ಸರ್ಕಾರ ಯಾವ ರಾಜ್ಯದ ಮೇಲೂ ಹಿಂದಿ ಹೇರಿಕೆ ಮಾಡಬಾರದು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟಿಸಿದರು. ಮೈಸೂರಿನಲ್ಲಿ ಹಾರ್ಡಿಂಗ್ ಬಳಿ ಪ್ರತಿಭಟಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಹಿಂದಿ ಸಂಪರ್ಕ ಭಾಷೆಯಾಗಿ ಬಳಸುವ ಬಗ್ಗೆ ಅಮಿಶ್ ಶಾ ಸೂಚನೆ ನೀಡಬಾರದು ಎಂದು ಕಿಡಿಕಾರಿದರು.

ಹಿಂದಿ ಹೇರಿಕೆಯ ವಿರುದ್ಧ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿರುವುದು..

ಹಿಂದಿ ಹೇರಿಕೆ ಮಾಡಿದ್ರೆ ರಾಜ್ಯಾದ್ಯಂತ ತೀವ್ರ ಹೋರಾಟ ಮಾಡಲಾಗುವುದು. ಕೇಂದ್ರದಿಂದ ಪ್ರಾದೇಶಿಕ ಭಾಷೆಗಳನ್ನು ತುಳಿಯುವ ಹುನ್ನಾರ ನಡೆಸಲಾಗುತ್ತಿದೆ. ಹಿಂದಿಯಿಂದಾಗಿ ಕರ್ನಾಟಕಕ್ಕೆ ಅಪಾಯ ಇದೆ. ಕೂಡಲೇ ರಾಜ್ಯ ಸರ್ಕಾರ ಹಿಂದಿಯನ್ನು ತಿರಸ್ಕರಿಸಬೇಕು. ಲೋಕಸಭಾ ಸದಸ್ಯರು ಹಿಂದಿಯನ್ನು ವಿರೋಧಿಸಬೇಕು. ಕರ್ನಾಟಕದಿಂದ ಹಿಂದಿಯನ್ನು ತೊಲಗಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:ಯುವ ಕಾಂಗ್ರೆಸ್​ನಿಂದ ಗ್ಯಾಸ್ ಸಿಲಿಂಡರ್​​ಗೆ ಶ್ರದ್ಧಾಂಜಲಿ.. ನಡುರಸ್ತೆಯಲ್ಲಿ ಚಿತ್ರಾನ್ನ ತಯಾರಿಸಿ ಜನರಿಗೆ ಹಂಚಿಕೆ..

ಧಾರವಾಡದಲ್ಲಿ ಕಲ್ಲಂಗಡಿ ವ್ಯಾಪಾರ ಮಾಡುವ ಮುಸ್ಲಿಂಮರ ಅಂಗಡಿ ಮೇಲೆ ದಾಳಿ ಮಾಡಿ ನಷ್ಟ ಮಾಡಿರುವುದು ಖಂಡನೀಯ. ರಾಜ್ಯದ ಪರಿಸ್ಥಿತಿ ಬಗ್ಗೆ ಸರ್ಕಾರ ಗಂಭೀರವಾದ ಚಿಂತನೆ ನಡೆಸಬೇಕು. ರಾಜಕೀಯ ನಾಯಕರ ಹೇಳಿಕೆಗಳು ಅಶಾಂತಿಯನ್ನು ಉಂಟು ಮಾಡ್ತಿವೆ. ಹಿಂದೂಯೇತರರ ಅಂಗಡಿಗಳನ್ನು ಧ್ವಂಸ ಮಾಡೋದು ಸರಿಯಲ್ಲ. ಮುಖ್ಯಮಂತ್ರಿಗಳು ಕೂಡಲೇ ಈ ಬಗ್ಗೆ ಗಮನಹರಿಸಬೇಕು. ಸರ್ಕಾರದ ಮೌನ ಸರಿಯಲ್ಲ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.

ABOUT THE AUTHOR

...view details