ಮೈಸೂರು: ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕೊರೊನಾ ಕುರಿತು ಸಭೆ ಹಮ್ಮಿಕೊಂಡಿದ್ದು, ಅದರ ಸಿದ್ಧತೆಗಾಗಿ ಸಾಮಾನ್ಯ ಕಾರ್ಯಕರ್ತರಂತೆ ಕುರ್ಚಿಗಳನ್ನು ಜೋಡಿಸಿ ಶಾಸಕ ತನ್ವೀರ್ ಸೇಠ್ ಸರಳತೆ ತೋರಿದ್ದಾರೆ.
ಎನ್ಆರ್ಕ್ಷೇತ್ರದಲ್ಲಿ ಹೆಚ್ಚಾಗಿರುವ ಕೊರೊನಾ ಸೋಂಕು ಹರಡುವಿಕೆ ತಡೆಗೆ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ತನ್ವೀರ್ ಸೇಠ್, ಸಭೆಗೂ ಮುನ್ನ ಸಾಮಾನ್ಯ ಕಾರ್ಯಕರ್ತನಂತೆ ಕುರ್ಚಿಗಳನ್ನು ಜೋಡಿಸಿ ಸಭೆಗೆ ಅಗತ್ಯವಿದ್ಧ ಸಿದ್ಧತೆ ಪೂರ್ಣಗೊಳಿಸಲು ಸಹಾಯ ಮಾಡಿದರು.