ಮೈಸೂರು: ಅಕ್ಟೋಬರ್ 21ರಂದು ತಮಿಳುನಾಡಿನ ಮಧುಮಲೈನಲ್ಲಿ ಸೆರೆ ಹಿಡಿಯಲಾಗಿದ್ದ ಟಿ-23 ಹೆಸರಿನ ಹುಲಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಅದಕ್ಕೆ ನೀಡುತ್ತಿರುವ ಚಿಕಿತ್ಸೆಯ ವಿಡಿಯೋ ಈಟಿವಿ ಭಾರತ್ಗೆ ಲಭ್ಯವಾಗಿದೆ.
ಮಧುಮಲೈನಲ್ಲಿ ಸೆರೆ ಹಿಡಿಯಲಾದ ಟಿ-23 ಹುಲಿಗೆ ಮೈಸೂರಿನ ಮೃಗಾಲಯದ ಅಧೀನದಲ್ಲಿರುವ ಕೂರ್ಗಳ್ಳಿ ಸಮೀಪದ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಅದರ ತೂಕ ಅಂದಾಜು 200 ಕೆಜಿಯಷ್ಟು ಆಗಿದೆ.
ಮಧುಮಲೈನಲ್ಲಿ ಸೆರೆಸಿಕ್ಕ ಟಿ-23 ಹುಲಿಯ ಆರೋಗ್ಯದಲ್ಲಿ ಚೇತರಿಕೆ ಮಧುಮಲೈನಲ್ಲಿ ಸೆರೆ ಹಿಡಿಯಲಾದ ಗಂಡು ಹುಲಿಯು ಟೆರಿಟೆರಿ ಫೈಟ್ನಲ್ಲಿ ಮತ್ತು ಇತರೆ ಕಾರಣಗಳಿಂದ ಗಂಭೀರವಾಗಿ ಗಾಯಗೊಂಡಿತ್ತು. ಸುಮಾರು 7 ರಿಂದ 8 ಕಡೆ ಗಾಯಗಳಾಗಿದ್ದವು. ಅವುಗಳೆಲ್ಲ ಬಹುತೇಕ ವಾಸಿಯಾಗಿವೆ. ಆದರೂ ಸಹ ಪ್ರತಿದಿನ ಟಿ-23 ಹುಲಿಗೆ ಡ್ರೆಸ್ಸಿಂಗ್ ಮಾಡಲಾಗುತ್ತಿದೆ.
ಜೊತೆಗೆ ಈ ಹುಲಿಯು ಸಿಬ್ಬಂದಿಯ ಆಜ್ಞೆಯನ್ನು ನಿಧಾನವಾಗಿ ಪಾಲಿಸುತ್ತಿದೆ. ಹುಲಿಯ ಮಲವನ್ನು ಪರೀಕ್ಷಿಸಿದ್ದು ಅದಕ್ಕೆ ಯಾವುದೇ ರೀತಿಯ ಸೋಂಕು ತಗುಲಿಲ್ಲ ಎಂದು ತಿಳಿದು ಬಂದಿದೆ. ಇನ್ನೂ ಹುಲಿಯ ಕಣ್ಣಿನ ಭಾಗದ ಗಾಯವು ದೀರ್ಘ ಕಾಲದ ಸಮಸ್ಯೆಯಾಗಿದೆ.
ಇದನ್ನೂ ಓದಿ:ಪ್ರೀತಿಯಲ್ಲಿ ಬಿದ್ದ ಅಪ್ರಾಪ್ತರು ಪರಾರಿ.. ನಾಲ್ವರನ್ನು ಪತ್ತೆ ಹಚ್ಚಿದ ತುಮಕೂರಿನ ಕೋಳಾಲ ಪೊಲೀಸರು
ಹುಲಿಯಲ್ಲಿ ಇನ್ನೂ ಕಾಡಿನ ನಡವಳಿಕೆ ಇರುವುದರಿಂದ ಅದನ್ನು ಚಿಕ್ಕ ಬೋನ್ನಲ್ಲಿ ಇರಿಸಲಾಗಿದೆ. ಹುಲಿಯು ಚೆನ್ನಾಗಿ ಊಟ ಮಾಡುತ್ತಿದೆ. ವಾರದ 5 ದಿನಗಳಲ್ಲಿ 10 ಕೆಜಿ ದನದ ಮಾಂಸವನ್ನು ನೀಡಲಾಗುತ್ತಿದೆ. ಹುಲಿಯು ಚೆನ್ನಾಗಿ ನಿದ್ದೆ ಮಾಡುತ್ತಿದೆ.
ಅದು ಕುಳಿತುಕೊಳ್ಳುವ ಭಂಗಿ ಕೂಡ ಸುಧಾರಿಸಿದೆ. ಹಾಗಿದ್ದರೂ ಸಹ ಹುಲಿಯ ಆರೋಗ್ಯದ ದೃಷ್ಟಿಯಿಂದ ಇನ್ನೂ 5-6 ತಿಂಗಳುಗಳ ಆರೈಕೆಯ ಅಗತ್ಯವಿದೆ ಎಂದು ಮೃಗಾಲಯದ ಮೂಲಗಳು ಖಚಿತಪಡಿಸಿವೆ.