ಕರ್ನಾಟಕ

karnataka

ETV Bharat / city

ರೋಹಿಣಿ ಸಿಂಧೂರಿ ವಿರುದ್ಧ ನಾಳೆ ಸಾ.ರಾ.ಮಹೇಶ್ ಏಕಾಂಗಿ ಪ್ರತಿಭಟನೆ

ರೋಹಿಣಿ ಸಿಂಧೂರಿ ಹೇಳಿಕೆಯಂತೆ ರಾಜಕಾಲುವೆ ಮೇಲೆ ಸಾರಾ ಕನ್ವೆನ್ಷನ್​​ ಹಾಲ್ ನಿರ್ಮಾಣ ಸತ್ಯವಾಗಿದ್ದರೆ ಸಾರ್ವಜನಿಕ ಜೀವನದಿಂದ ನಿವೃತ್ತಿ ಘೋಷಣೆ ಮಾಡುತ್ತೇನೆ ಎಂದು ಸಾ.ರಾ.ಮಹೇಶ್ ಹೇಳಿದ್ದಾರೆ.

By

Published : Jun 9, 2021, 10:33 PM IST

ಪ್ರತಿಭಟನೆ
ಪ್ರತಿಭಟನೆ

ಮೈಸೂರು: ಸಾ.ರಾ.ಮಹೇಶ್ ಒಡೆತನದ ಸಾರಾ ಕನ್ವೆನ್ಷನ್​ ಹಾಲ್ ವಿಚಾರವಾಗಿ ರೋಹಿಣಿ ಸಿಂಧೂರಿ ಹೇಳಿಕೆ ಖಂಡಿಸಿ, ಈ ಸಮಸ್ಯೆ ಇತ್ಯರ್ಥವಾಗುವವರೆಗೂ ಏಕಾಂಗಿ ಪ್ರತಿಭಟನೆ ಮಾಡುವುದಾಗಿ ಸಾ.ರಾ.ಮಹೇಶ್ ಹೇಳಿದ್ದಾರೆ.

ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಇಬ್ಬರ ನಡುವೆ ಅರೋಪ ಹಾಗೂ ಪ್ರತ್ಯಾರೋಪ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.

ಸಾ.ರಾ ಮಹೇಶ್​ ಪತ್ರ

ಮೈಸೂರಿನ ದಟ್ಟಗಳ್ಳಿಯಲ್ಲಿರುವ ಸಾ.ರಾ.ಮಹೇಶ್ ಒಡೆತನದ ಸಾರಾ ಕನ್ವೆನ್ಷನ್​ ಹಾಲ್, ರಾಜಕಾಲುವೆ ಮೇಲೆ ನಿರ್ಮಾಣವಾಗಿದೆ ಎಂದು ವೆಬ್‍ಸೈಟ್‍ವೊಂದಕ್ಕೆ ರೋಹಿಣಿ ಸಿಂಧೂರಿ ಹೇಳಿಕೆ ನೀಡಿದ್ದಾರೆ. ಇದರಿಂದ ಕೆಂಡಾಮಂಡಲರಾಗಿರುವ ಸಾ.ರಾ.ಮಹೇಶ್, ರಾಜಕಾಲುವೆ ಮೇಲೆ ಚೌಲ್ಟ್ರಿ ನಿರ್ಮಾಣ ಸತ್ಯವಾಗಿದ್ದರೆ ಸಾರ್ವಜನಿಕ ಜೀವನದಿಂದ ನಿವೃತ್ತಿ ಘೋಷಣೆ ಮಾಡುತ್ತೇನೆ ಎಂದಿದ್ದಾರೆ.

ಈ ಸಂಬಂಧ ಪತ್ರ ಬರೆದಿರುವ ಶಾಸಕ ಸಾ.ರಾ.ಮಹೇಶ್, ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಏಕಾಂಗಿ ಪ್ರತಿಭಟನೆ ಮಾಡುವುದಾಗಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ABOUT THE AUTHOR

...view details