ಕರ್ನಾಟಕ

karnataka

ಕಲ್ಯಾಣ ಮಂಟಪಕ್ಕೆ ಭೂ ಒತ್ತುವರಿ : ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ ಆರ್‌ಟಿಐ ಕಾರ್ಯಕರ್ತ

By

Published : May 3, 2022, 3:54 PM IST

ಸಾ.ರಾ. ಮಹೇಶ್​ ಪತ್ನಿಯ ಹೆಸರಿನಲ್ಲಿರುವ ಕಲ್ಯಾಣ ಮಂಟಪಕ್ಕೆ ಭೂ ಒತ್ತುವರಿ ಮಾಡಿ ಅಕ್ರಮವೆಸಗಿದ್ದಾರೆ. ಈ ಅಕ್ರಮದ ಬಗ್ಗೆ ದೂರು ನೀಡಿದ ನಂತರ ಮೂಡಾ ಅಧಿಕಾರಿಗಳನ್ನು ಬಳಸಿಕೊಂಡು ಆನ್​ಲೈನ್​ ಹರಾಜು ಮಾಡಿ ತಮ್ಮ ಕುಟುಂಬದವರಲ್ಲೇ ನಿವೇಶನಗಳನ್ನು ಹಂಚಿಕೆ ಮಾಡಿ ಅಕ್ರಮ ವೆಸಗಿದ್ದಾರೆ..

Wedding hall
ಕಲ್ಯಾಣ ಮಂಟಪಕ್ಕೆ ಭೂ ಒತ್ತುವರಿ

ಮೈಸೂರು :ಶಾಸಕ ಸಾ.ರಾ ಮಹೇಶ್ ಪತ್ನಿ ಅನಿತಾ ಮಹೇಶ್ ಹೆಸರಿನಲ್ಲಿರುವ ಕಲ್ಯಾಣ ಮಂಟಪಕ್ಕೆ ಭೂ ಒತ್ತುವರಿ ಮಾಡಿ ಅಕ್ರಮವೆಸಗಿದ್ದಾರೆ. ದೂರು ನೀಡಿದ ನಂತರ ಆ ಭೂಮಿಯನ್ನು ನಿವೇಶನವಾಗಿ ಪರಿವರ್ತಿಸಿದ್ದಾರೆ. ಇದರಲ್ಲಿ ಮೂಡಾ ಅಧಿಕಾರಿಗಳ ಅಕ್ರಮವೂ ಇದೆ ಎಂದು ಆರ್‌ಟಿಐ ಕಾರ್ಯಕರ್ತ ಗಂಗರಾಜು ದಾಖಲೆಗಳನ್ನು ಬಿಡುಗಡೆ ಮಾಡಿ ತನಿಖೆಗೆ ಆಗ್ರಹಿಸಿದ್ದಾರೆ.

ಮೈಸೂರು ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ನಗರದ ದಟ್ಟಗಳ್ಳಿಯಲ್ಲಿರುವ ಶಾಸಕ ಸಾ.ರಾ. ಮಹೇಶ್ ಪತ್ನಿ ಅನಿತಾ ಮಹೇಶ್ ಹೆಸರಿನಲ್ಲಿರುವ ಸಾ.ರಾ ಕಲ್ಯಾಣ ಮಂಟಪಕ್ಕೆ 19 ವರ್ಷಗಳ ಹಿಂದೆ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗಿದೆ. ಕಲ್ಯಾಣ ಮಂಟಪ ಹಾಗೂ ಅದರ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಿದ್ದಾರೆ. ಈ ಜಾಗ ಅಕ್ರಮ ಎಂದು ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ ನಂತರ ಎಚ್ಚೆತ್ತ ಶಾಸಕರು ಆ ಭೂಮಿಯನ್ನು ನಿವೇಶನವಾಗಿ ಪರಿವರ್ತಿಸಿದ್ದಾರೆ.

ಆ ಭೂಮಿಯನ್ನು ಶಾಸಕರು ತಾಯಿ, ಅತ್ತೆ ನಾದಿನಿಯ ಹೆಸರಿನ ನಿವೇಶನಗಳಾಗಿ ಪರಿವರ್ತನೆ ಮಾಡಿದ್ದಾರೆ. ಶಾಸಕರು ಪ್ರಭಾವವನ್ನು ಬಳಸಿ ಆನ್‌ಲೈನ್ ಹರಾಜಿನಲ್ಲೇ ಆಸ್ತಿ ಪರಿವರ್ತನೆ ಮಾಡಿದ್ದರೆ, ಈ ಕಾರ್ಯದಲ್ಲಿ ಮೂಡಾ ಆಯುಕ್ತರಾದ ಡಾ.ಡಿ ಬಿ ನಟೇಶ್ ಶಾಮೀಲಾಗಿದ್ದಾರೆ. ಹೀಗಾಗಿ, ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಇದರ ಜೊತೆಗೆ ಈಗಿನ ಮೂಡಾ ಆಯುಕ್ತರಾದ ನಟೇಶ್ ಅವರನ್ನ ಬೇರೆ ಕಡೆ ವರ್ಗಾಯಿಸಬೇಕು ಆನ್ಲೈನ್ ಹರಾಜಿನಲ್ಲಿ ಒಂದೇ ಕುಟುಂಬದ ಸದಸ್ಯರಿಗೆ ಯಾವ ರೀತಿ ನಿವೇಶನ ಮಂಜೂರಾಯಿತು ಎಂಬ ಬಗ್ಗೆ ತನಿಖೆ ಮಾಡಬೇಕು. 19 ವರ್ಷಗಳ ಹಿಂದೆ ಒತ್ತುವರಿ ಮಾಡಿ ಕಲ್ಯಾಣ ಮಂಟಪ ನಿರ್ಮಿಸಿರುವ ಸಾ.ರಾ ಮಹೇಶ್ ಹಾಗೂ ಅವರ ಪತ್ನಿ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ಡಿಸಾಸ್ಟರ್ ರಿಕವರಿ ಸೆಂಟರ್ ನಾಟಗ್ರಿಡ್​​ ಉದ್ಘಾಟಿಸಿದ ಅಮಿತ್ ಶಾ

ABOUT THE AUTHOR

...view details