ಕರ್ನಾಟಕ

karnataka

ETV Bharat / city

ಮೈಸೂರು: ಬ್ಯಾರಿಕೇಡ್ ತಳ್ಳಿ ಪೊಲೀಸರಿಗೆ ಅವಾಜ್ ಹಾಕಿದ ಸಿದ್ದರಾಮಯ್ಯ - ಮೈಸೂರು: ಬ್ಯಾರಿಕೇಡ್ ತಳ್ಳಿ ಪೊಲೀಸರಿಗೆ ಅವಾಜ್ ಹಾಕಿದ ಸಿದ್ದರಾಮಯ್ಯ

ಮೈಸೂರಿನ ಗಾಂಧಿವೃತ್ತದಿಂದ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ಬಂದಾಗ ಭದ್ರತಾ ಸಿಬ್ಬಂಧಿ ಬ್ಯಾರಿಕೇಡ್​ ಅಡ್ಡಲಾಗಿ ಇಟ್ಟಿದ್ದಕ್ಕೆ ಪೊಲೀಸರಿಗೆ ಅವಾಜ್​ ಹಾಕಿ ಬ್ಯಾರಿಕೇಡ್​ ತೆಗಿಸಿದರು.

Mysore Protest: Protest led by opposition leader Siddaramaiah
ಮೈಸೂರು: ಬ್ಯಾರಿಕೇಡ್ ತಳ್ಳಿ ಪೊಲೀಸರಿಗೆ ಅವಾಜ್ ಹಾಕಿದ ಸಿದ್ದರಾಮಯ್ಯ

By

Published : Apr 20, 2022, 5:52 PM IST

ಮೈಸೂರು: ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರವೇಶಕ್ಕೆ ಅಡ್ಡಿಪಡಿಸಿದ್ದಕ್ಕೆ ಪೊಲೀಸರ ಮೇಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದರು. ಮೈಸೂರಿನ ಗಾಂಧಿವೃತ್ತದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ಬಂದಾಗ, ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಬ್ಯಾರಿಕೇಡ್ ತೆಗೆಯಲು ತಡ ಮಾಡಿದ್ದಾರೆ.


ಇದರಿಂದ ಕೋಪಗೊಂಡ ಸಿದ್ದರಾಮಯ್ಯ ಬ್ಯಾರಿಕೇಡ್ ತಳ್ಳಿ ಪೊಲೀಸರಿಗೆ ಅವಾಜ್ ಹಾಕಿದ್ದಾರೆ. ನಂತರ ಹಾಕಿರುವ ಬ್ಯಾರಿಕೇಡ್ ತೆಗೆಯುವಂತೆ ಸೂಚನೆ ಕೊಟ್ಟು, ಬ್ಯಾರಿಕೇಡ್ ತೆಗೆಸಿದರು. ಡಿಸಿಪಿ‌ ಪ್ರದೀಪ್ ಗುಂಟೆ ಅವರ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿತ್ತು.

ಇದನ್ನೂ ಓದಿ:ಕಸದ ಲಾರಿಗಳಿಂದ ಅಪಘಾತ : ಬೆಂಗಳೂರು ಪಾಲಿಕೆಯಲ್ಲಿರುವ ಗೈಡ್ ಲೈನ್ಸ್‌ ಏನು?

ABOUT THE AUTHOR

...view details