ಮೈಸೂರು:ಶಾಸಕ ತನ್ವೀರ್ ಸೇಠ್ ಅವರ ಮೇಲೆ ಹಲ್ಲೆ ಪ್ರಕರಣ ಸಂಬಂಧ ಅವರ ಗನ್ ಮ್ಯಾನ್ನನ್ನು ಕರ್ತವ್ಯ ಲೋಪದ ಹಿನ್ನೆಲೆ ಅಮಾನತು ಮಾಡಲಾಗಿದೆ.
ತನ್ವೀರ್ ಸೇಠ್ ಮೇಲಿನ ಹಲ್ಲೆ ಪ್ರಕರಣ: ಶಾಸಕರ ಗನ್ ಮ್ಯಾನ್ ಅಮಾನತು - ಶಾಸಕ ತನ್ವೀರ್ ಸೇಠ್ರ ಗನ್ ಮ್ಯಾನ್ ಅಮಾನತು
ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ಪ್ರಕರಣ ಸಂಬಂಧ ಕರ್ತವ್ಯ ಲೋಪ ಎಸಗಿದ ಹಿನ್ನೆಲೆ ಅವರ ಗನ್ ಮ್ಯಾನ್ ಸಿಎಆರ್ ಪೇದೆ ಪೈರೋಜ್ ಖಾನ್ನನ್ನು ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ಅಮಾನತು ಮಾಡಿದ್ದಾರೆ.
![ತನ್ವೀರ್ ಸೇಠ್ ಮೇಲಿನ ಹಲ್ಲೆ ಪ್ರಕರಣ: ಶಾಸಕರ ಗನ್ ಮ್ಯಾನ್ ಅಮಾನತು](https://etvbharatimages.akamaized.net/etvbharat/prod-images/768-512-5109348-thumbnail-3x2-megha.jpg)
ಗನ್ ಮ್ಯಾನ್ ಪೈರೋಜ್ ಖಾನ್
ನ.17ರ ರಾತ್ರಿ ನಗರದ ಬನ್ನಿಮಂಪಟದ ಸಮೀಪವಿರುವ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ತನ್ವೀರ್ ಸೇಠ್ ಮೇಲೆ ಫರಾನ್ ಎಂಬ ಯುವಕ ಮಚ್ಚಿನಿಂದ ಹಲ್ಲೆ ಮಾಡಿದ್ದ. ಆ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ತನ್ವೀರ್ ಸೇಠ್ ಅವರ ಗನ್ ಮ್ಯಾನ್ ಸಿಎಆರ್ ಪೇದೆ ಪೈರೋಜ್ ಖಾನ್ನನ್ನು ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ಅಮಾನತು ಮಾಡಿದ್ದಾರೆ.