ಮೈಸೂರು :ದೇವಾಲಯದ ಆದಾಯದ ವಿಚಾರದಲ್ಲಿ 2 ಗುಂಪುಗಳ ನಡುವೆ ಗ್ರಾಮದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದ ಸಪ್ತದೇವಾಲಯಗಳಿಗೆ ಬೀಗ ಹಾಕಲಾಗಿತ್ತು. ಆದರೆ, ಇಂದು ತಹಶಿಲ್ದಾರ್ ಅವರ ಮಧ್ಯಸ್ಥಿಕೆಯಿಂದ ಈ ಸಮಸ್ಯೆ ಬಗೆಹರಿದಿದೆ. ದೇವಾಲಯಗಳಲ್ಲಿ ಎಂದಿನಂತೆ ಪೂಜೆ ಆರಂಭವಾಗಿದೆ.
ತಹಶೀಲ್ದಾರ್ ಮಧ್ಯಸ್ಥಿಕೆಯಿಂದ ತಗಡೂರು ದೇವಾಲಯದ ವಿವಾದಕ್ಕೆ ಇತ್ಯರ್ಥ.. - ತಹಶಿಲ್ದಾರರ ಮಧ್ಯಸ್ಥಿಕೆಯಿಂದ ಈ ಸಮಸ್ಯೆ ಬಗೆಹರಿದಿದ್ದು
ದೇವಾಲಯದ ಬಾಗಿಲು ತೆರೆಸಿ ಭಕ್ತರ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ. ಎಂದಿನಂತೆ ಪೂಜೆ ಆರಂಭವಾಗಿದೆ. ಹಾಗೆಯೇ ಇನ್ನೂ ಮುಂದೆ ಈ ತರಹದ ಕಿತ್ತಾಟಗಳು, ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯನ್ನೂ ಸಹ ಪೋಲಿಸರು ನೀಡಿದ್ದಾರೆ.
![ತಹಶೀಲ್ದಾರ್ ಮಧ್ಯಸ್ಥಿಕೆಯಿಂದ ತಗಡೂರು ದೇವಾಲಯದ ವಿವಾದಕ್ಕೆ ಇತ್ಯರ್ಥ.. KN_MYS_5_TEMPLE_PROBLEM_SOLVE_NEWS_7208092](https://etvbharatimages.akamaized.net/etvbharat/prod-images/768-512-6186042-thumbnail-3x2-mn.jpg)
ಜಿಲ್ಲೆಯ ನಂಜನಗೂಡು ತಾಲೂಕಿನ ತಗಡೂರು ಗ್ರಾಮದ ಸಪ್ತ ದೇವಾಲಯಗಳಲ್ಲಿ ಪೂಜೆ ಮಾಡುವ ಪೂಜಾರಿಗಳು ದೇವಾಲಯಕ್ಕೆ ಬರುವ ಆದಾಯದಲ್ಲಿ ಈವರೆಗೆ ಲೆಕ್ಕ ತೋರಿಸದೆ ಸ್ವಂತಕ್ಕೆ ಬಳಸಿಕೊಂಡಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಈ ವಿಚಾರದಲ್ಲಿ ಕಿತ್ತಾಟವಾಗಿ ಸಪ್ತ ದೇವಾಲಗಳಿಗೂ ಬೀಗ ಹಾಕಿ ಶಿವರಾತ್ರಿ ಹಬ್ಬದ ದಿನವೂ ಪೂಜೆ ಸಲ್ಲಿಸಲು ಸಹ ಅವಕಾಶ ನೀಡಿರಲಿಲ್ಲ. ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ತಹಶೀಲ್ದಾರ್ ಹಾಗೂ ಪೊಲೀಸರು ಭೇಟಿ ನೀಡಿ ಈ ಎಲ್ಲ ಸಮಸ್ಯೆಗಳನ್ನ ಬಗೆಹರಿಸಿದ್ದಾರೆ.
ದೇವಾಲಯದ ಬಾಗಿಲು ತೆರೆಸಿ ಭಕ್ತರ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ. ಎಂದಿನಂತೆ ಪೂಜೆ ಆರಂಭವಾಗಿದೆ. ಹಾಗೆಯೇ ಇನ್ನೂ ಮುಂದೆ ಈ ತರಹದ ಕಿತ್ತಾಟಗಳು, ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯನ್ನೂ ಸಹ ಪೋಲಿಸರು ನೀಡಿದ್ದಾರೆ.