ಕರ್ನಾಟಕ

karnataka

ETV Bharat / city

ಮೈಸೂರು ರೈಲ್ವೆ ನಿಲ್ದಾಣದಿಂದ ಹೊರಡುವ, ಬರುವ ಹಲವು ರೈಲುಗಳ ಸಂಚಾರ ರದ್ದು - undefined

ಮೈಸೂರು ರೈಲ್ವೆ ನಿಲ್ದಾಣದಿಂದ ನಿರ್ಗಮಿಸುವ ಹಾಗೂ ನಿಲ್ದಾಣಕ್ಕೆ ಆಗಮಿಸುವ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರು ರೈಲ್ವೇ ನಿಲ್ದಾಣ

By

Published : Jun 11, 2019, 4:56 AM IST

ಮೈಸೂರು: ವಿವಿಧ ಕಾಮಗಾರಿಳ ಹಿನ್ನೆಲೆಯಲ್ಲಿ ಮೈಸೂರು ರೈಲ್ವೆ ನಿಲ್ದಾಣದಿಂದ ಹೋಗುವ ಹಾಗೂ ಆಗಮಿಸುವ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರದ್ದಾಗಿರುವ ರೈಲು ಸೇವೆಗಳು...

ಜೂ.21 ರಂದು ಮೈಸೂರಿನಿಂದ ಹೊರಡುವ ಮೈಸೂರು-ರಾಣೆಗುಂಟ ಎಕ್ಸ್‌ಪ್ರೆಸ್ ಸಂಚಾರ, ಜೂ. 22ರಂದು ರಾಣೆಗುಂಟದಿಂದ ಮೈಸೂರಿಗೆ ಬರುವ ರಾಣೆಗುಂಟ-ಮೈಸೂರು ಎಕ್ಸ್‌ಪ್ರೆಸ್ ಸಂಚಾರ, ಜೂ.16 ರಿಂದ 23 ರವರೆಗೆ ಚಾಮರಾಜನಗರದಿಂದ ಮೈಸೂರಿಗೆ ಬರುವ ಹಾಗೂ ಮೈಸೂರಿನಿಂದ ಚಾಮರಾಜನಗರಕ್ಕೆ ತೆರಳುವ ಪ್ಯಾಸೆಂಜರ್ ರೈಲು ಹಾಗೂ ಮೈಸೂರಿನಿಂದ ಯಶವಂತಪುರಕ್ಕೆ ತೆರಳುವ ಪ್ಯಾಸೆಂಜರ್ ರೈಲು ಸೇವೆ ರದ್ದಾಗಿದೆ.

ಮೈಸೂರಿನಿಂದ ಕೆಎಸ್‌ಆರ್ ಬೆಂಗಳೂರು ನಡುವೆ ಬರುವ ಹಾಗೂ ಹೋಗುವ ಪ್ಯಾಸೆಂಜರ್, ಮೈಸೂರಿನಿಂದ ತಾಳಗುಪ್ಪಕ್ಕೆ ಹೋಗುವ ಪ್ಯಾಸೆಂಜರ್, ಮೈಸೂರಿನಿಂದ ನಂಜನಗೂಡಿಗೆ ಹೋಗುವ ಹಾಗೂ ಬರುವ ಪ್ಯಾಸೆಂಜರ್, ಶಿವಮೊಗ್ಗ- ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್, ಸೇಲಂನಿಂದ ಯಶವಂತಪುರಕ್ಕೆ ಬರುವ ಪ್ಯಾಸೆಂಜರ್ ಹಾಗೂ ಯಶ್ವಂತಪುರದಿಂದ ಮೈಸೂರಿಗೆ ಬರುವ ಪ್ಯಾಸೆಂಜರ್ ರೈಲು ಸಂಚಾರ ರದ್ದಾಗಿದೆ.

ಬೆಂಗಳೂರಿನಿಂದ ಅರಸೀಕೆರೆಗೆ ತೆರಳುವ ಪ್ಯಾಸೆಂಜರ್, ಮೈಸೂರು-ಯಲಹಂಕಗೆ ಹೋಗುವ ಹಾಗೂ ಬರುವ ಮಾಲ್ಗುಡಿ ಎಕ್ಸ್‌ಪ್ರೆಸ್, ಮೈಸೂರು-ಕೆಎಸ್‌ಆರ್ ಬೆಂಗಳೂರಿಗೆ ಹೋಗುವ-ಬರುವ ರಾಜ್ಯರಾಣಿ ಎಕ್ಸ್‌ಪ್ರೆಸ್, ಜೂ.17ರಿಂದ 24ರವರೆಗೆ ಸೇಲಂನಿಂದ ಯಶವಂತಪುರಕ್ಕೆ ಹೋಗುವ ಹಾಗೂ ಬರುವ ಪ್ಯಾಸೆಂಜರ್, ಯಶವಂತಪುರದಿಂದ ಮೈಸೂರಿಗೆ ಬರುವ ಪ್ಯಾಸೆಂಜರ್, ಶಿವಮೊಗ್ಗದಿಂದ ಕೆಎಸ್‌ಆರ್ ಬೆಂಗಳೂರಿಗೆ ತೆರಳುವ ಪ್ಯಾಸೆಂಜರ್, ಅರಸೀಕೆರೆಯಿಂದ ಕೆಎಸ್‌ಆರ್ ಬೆಂಗಳೂರಿಗೆ ತೆರಳುವ, ತಾಳಗುಪ್ಪದಿಂದ ಮೈಸೂರಿಗೆ ಬರುವ ಪ್ಯಾಸೆಂಜರ್, ಕೆಎಸ್‌ಆರ್ ಬೆಂಗಳೂರಿನಿಂದ ಚಾಮರಾಜನಗರಕ್ಕೆ ಬರುವ ಪ್ಯಾಸೆಂಜರ್ ರದ್ದು ಮಾಡಲಾಗಿದೆ.

ರೈಲುಗಳ ಭಾಗಶಃ ರದ್ದು...

ಜೂ.15 ರಿಂದ 22ವರೆಗೆ ಕಾಚಿಗೂಡ-ಮೈಸೂರು ಎಕ್ಸ್‌ಪ್ರೆಸ್ ರೈಲು, ಮೈಸೂರು-ಚೆನ್ನೈ ಎಕ್ಸ್‌ಪ್ರೆಸ್, ಪಾಂಡವಪುರ-ಮೈಸೂರು ಸಂಚಾರ ರದ್ದಾಗುವ ಸಾಧ್ಯತೆ ಇದೆ. ಇನ್ನು ಮೈಸೂರು-ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್ ರೈಲು ನಾಗನಹಳ್ಳಿಯಲ್ಲಿ ನಿಲ್ಲುವುದಿಲ್ಲ. ಜೂ.16-23 ಕಾಚಿಗೂಡ-ಮೈಸೂರು ಎಕ್ಸ್‌ಪ್ರೆಸ್, ಮೈಸೂರು-ಚೆನ್ನೈ ಎಕ್ಸ್‌ಪ್ರೆಸ್ ರೈಲು, ಮೈಸೂರು-ಪಾಂಡವಪುರ ಸಂಚಾರ ರದ್ದಾಗಿದೆ. ಜೂ.16-23 ಮೈಸೂರು-ಅರಸೀಕೆರೆ, ಮೈಸೂರು-ಶಿವಮೊಗ್ಗ ಪ್ಯಾಸೆಂಜರ್ ರೈಲು ಬೆಳಗೊಳದಲ್ಲಿ ನಿಲ್ಲುವುದಿಲ್ಲ. ಜೂ.19ರಿಂದ 22 ರವರೆಗೆ ಕೆಎಸ್‌ಆರ್ ಬೆಂಗಳೂರು- ಮೆಮು ರೈಲು ಗಾಡಿಯು ಮೈಸೂರು-ರಾಮನಗರ ನಡುವೆ ಸಂಚಾರ ರದ್ದಾಗಿದೆ. ಜೂ.18-19ರಂದು ಮೈಸೂರು-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು, ಮೈಸೂರು-ಮಂಡ್ಯ ನಡುವೆ ಸೇವೆ ರದ್ದಾಗುವ ಸಾಧ್ಯತೆ ಇದೆ.

ರೈಲುಗಳ ತಿರುವು...

ಜೂ.16-18 ಕೆಎಸ್‌ಆರ್ ಬೆಂಗಳೂರು-ಕಣ್ಣೂರು/ಕಾರವಾರ ಎಕ್ಸ್‌ಪ್ರೆಸ್ ರೈಲು ಸೇವೆ ರದ್ದು. ಜೂ.15ರಿಂದ 22ರವರೆಗೆ ಕಣ್ಣೂರು/ಕಾರವಾರ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಸೇವೆ ರದ್ದು.

ರೈಲುಗಳ ಮರುಹೊಂದಿಕೆ...

ಜೂ.18-19 ಮೈಸೂರು ಬಾಗಲಕೋಟೆ ಎಕ್ಸ್‌ಪ್ರೆಸ್, ಜೂ.19 ಮೈಸೂರು-ಸೋಲಾಪುರ, ಜೂ.19 ಮೈಸೂರು-ಮಯಿಲಾಡುತುರೈ ರೈಲುಗಳ ಮರುಹೊಂದಿಕೆ ಮಾಡಲಾಗಿದೆ ಎಂದು ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details