ಕರ್ನಾಟಕ

karnataka

ETV Bharat / city

ತನ್ವಿರ್ ಸೇಠ್ ಕೊಲೆ ಯತ್ನ ಪ್ರಕರಣ ಚಾರ್ಚ್​ ಶೀಟ್ ಸಲ್ಲಿಕೆಗೆ 30 ದಿನ ಬಾಕಿ: ಕೆ. ಟಿ. ಬಾಲಕೃಷ್ಣ - mysore police Janasnehi Workshop

ತನ್ವೀರ್ ಸೇಠ್ ಪ್ರಕರಣದ ವಿಚಾರಣೆ ಹಂತದಲ್ಲಿ ನಾವು ಯಾವುದೇ ಒತ್ತಡಕ್ಕೆ ಮಣಿಯದೆ ಕೆಲಸ ಮಾಡುತ್ತಿದ್ದೇವೆ. ಪ್ರಕರಣ ವರದಿಗಳನ್ನು ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತೀದ್ದಿವಿ. ಚಾರ್ಟ್ ಶೀಟ್ ಸಲ್ಲಿಸಲು ಮೂವತ್ತು ದಿನಗಳು ಸಮಯವಿದೆ ಎಂದು ಪೊಲೀಸ್ ಆಯುಕ್ತ ಕೆ. ಟಿ. ಬಾಲಕೃಷ್ಣ ತಿಳಿಸಿದ್ದಾರೆ.

k-t-balakrishna-statement-on-tanvir-seth-murder-case
ತನ್ವಿರ್ ಸೇಠ್ ಕೊಲೆ ಪ್ರಕರಣ ಕುರಿತು ಮೈಸೂರು ಪೊಲೀಸ್ ಆಯುಕ್ತರ ಹೇಳಿಕೆ

By

Published : Dec 17, 2019, 4:48 PM IST

ಮೈಸೂರು:ಎನ್. ಆರ್. ಕ್ಷೇತ್ರದ ಶಾಸಕ ತನ್ವಿರ್ ಸೇಠ್ ಕೊಲೆ ಯತ್ನ ಪ್ರಕರಣದ ವರದಿ ನೀಡಲು ಇನ್ನು ಒಂದು ತಿಂಗಳು ಸಮಯವಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ. ಟಿ. ಬಾಲಕೃಷ್ಣ ಅವರು ತಿಳಿಸಿದ್ದಾರೆ.

ಜನಸ್ನೇಹಿ ಪೊಲೀಸ್ ಕಾರ್ಯಗಾರ ಉದ್ಘಾಟನೆಗೆ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿ, ತನ್ವೀರ್ ಸೇಠ್ ಪ್ರಕರಣದ ವಿಚಾರಣೆ ಹಂತದಲ್ಲಿ ನಾವು ಯಾವುದೇ ಒತ್ತಡಕ್ಕೆ ಮಣಿಯದೆ ಕೆಲಸ ಮಾಡುತ್ತಿದ್ದೇವೆ. ಪ್ರಕರಣ ವರದಿಗಳನ್ನು ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತೀದ್ದಿವಿ. ಚಾರ್ಟ್ ಶೀಟ್ ಸಲ್ಲಿಸಲು ಮೂವತ್ತು ದಿನಗಳು ಸಮಯವಿದೆ ಎಂದರು.

ತನ್ವಿರ್ ಸೇಠ್ ಕೊಲೆ ಪ್ರಕರಣ ಕುರಿತು ಮೈಸೂರು ಪೊಲೀಸ್ ಆಯುಕ್ತರ ಹೇಳಿಕೆ

ತಿಂಗಳೊಳಗೆ ಸಮಗ್ರ ತನಿಖೆಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ನಂತರ ಸೂಚನೆ ಮೇರೆಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಹೊಸ ವರ್ಷ ಸಂಭ್ರಮಾಚರಣೆಗೆ ಪೊಲೀಸ್ ಇಲಾಖೆ ಸರ್ವಸನ್ನದ್ಧವಾಗಿದೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಲಾಗುತ್ತದೆ ಎಂದು ಹೇಳಿದರು.

ABOUT THE AUTHOR

...view details