ಕರ್ನಾಟಕ

karnataka

ನನಗೆ ರಾಜಕೀಯ ಅರ್ಥವಾಗುತ್ತೆ, ಆದ್ರೆ ರಾಜಕೀಯ ಮಾಡಲು ಬರಲ್ಲ: ಪ್ರಮೋದಾದೇವಿ ಒಡೆಯರ್​​

By

Published : Jun 28, 2019, 5:11 PM IST

Updated : Jun 28, 2019, 5:35 PM IST

ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮ ಶತಮಾನೋತ್ಸವ ಆಚರಣೆಗೆ ಸಂಬಂಧಿಸಿದಂತೆ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸುದ್ದಿಗೋಷ್ಠಿ ಕರೆದಿದ್ದರು. ಈ ಸಂದರ್ಭ ಮಾತನಾಡಿದ ಅವರು, ನನಗೆ ರಾಜಕೀಯ ಅರ್ಥವಾಗುತ್ತದೆ. ಆದರೆ ರಾಜಕೀಯ ಮಾಡಲು ಮಾತ್ರ ಬರುವುದಿಲ್ಲ. ಆದರೆ ಯದುವೀರ್ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ ಎಂದಿದ್ದಾರೆ.

ರಾಜಮಾತೆ ಪ್ರಮೋದಾದೇವಿ ಒಡೆಯರ್ ಸುದ್ದಿಗೋಷ್ಟಿ

ಮೈಸೂರು:ನನಗೆ ರಾಜಕೀಯ ಚೆನ್ನಾಗಿ ಅರ್ಥವಾಗುತ್ತದೆ. ಆದರೆ ನನ್ನಿಂದ ರಾಜಕೀಯ ಮಾಡಲು ಬರುವುದಿಲ್ಲ. ಆದ್ದರಿಂದ ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.

ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮ ಶತಮಾನೋತ್ಸವ ಆಚರಣೆಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು, ನಾನು ರಾಜಕಾರಣಕ್ಕೆ ಬರುವುದಿಲ್ಲ. ಆದರೆ ಯದುವೀರ್ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ ಎಂದರು.

ಜುಲೈ 18ಕ್ಕೆ ಮೈಸೂರಿನ ಆಧುನಿಕ ಹರಿಕಾರ ಎಂದು ಖ್ಯಾತಿ ಪಡೆದಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮ ಶತಮಾನೋತ್ಸವ ಆಚರಣೆ ಅರಮನೆಯ ದರ್ಬಾರ್ ಹಾಲ್​ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಮಾನ್ಯ ರಾಜ್ಯಪಾಲರು ಉದ್ಘಾಟಿಸಲಿದ್ದು, ಇದೇ ಕಾರ್ಯಕ್ರಮ ಜುಲೈ 20ರಂದು ಬೆಂಗಳೂರು ಅರಮನೆಯಲ್ಲಿ ನಡೆಯಲಿದೆ. ಜಯಂತಿಯನ್ನು ಸರ್ಕಾರವೇ ಮಾಡಿದರೆ ಸಂತೋಷ. ಇಲ್ಲ ಎಂದರೆ ನಾವೇ ಮಾಡುತ್ತೇವೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಮೋದಾದೇವಿ ಒಡೆಯರ್​​

ಇದೇ ಸಂದರ್ಭದಲ್ಲಿ ಜಗನ್ಮೋಹನ ಅರಮನೆಗೆ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣ ಎಂದು ಹೆಸರಿಡಲು ತಿರ್ಮಾನಿಸಲಾಗಿದೆ. ‌ಕಾರ್ಯಕ್ರಮ ನಡೆಯುವ ವೇಳೆ ಸುಮಾರು 10 ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.

ಈ ಜಯಂತಿ ಕಾರ್ಯಕ್ರಮಕ್ಕೆ ದೆಹಲಿ ಮತ್ತು ಮುಂಬೈಯ ರಾಜಮನೆತನದವರು ಸೇರಿದಂತೆ, ಸುಮಾರು 800 ರಿಂದ 1000 ಜನ ಗಣ್ಯರು ಭಾಗವಹಿಸುತ್ತಾರೆ ಎಂದರು.

ರಾಜಮನೆತನದ ಆಸ್ತಿ ವಿವಾದ ಕೋರ್ಟ್​ನಲ್ಲಿ ಇತ್ಯರ್ಥವಾಗಿ 8 ವರ್ಷಗಳಾದರೂ ನಮ್ಮ ಕೈ ಸೇರಿಲ್ಲ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಮೈಸೂರಿನ ರಾಜರು ನೀಡಿರುವ ಭೂಮಿಯಲ್ಲಿ ಸ್ಪೀಚ್ ಅಂಡ್ ಹಿಯರಿಂಗ್ ಮತ್ತು ಇತರ ಎರಡು ಕಟ್ಟಡಗಳಿಗೆ ಜಯಚಾಮರಾಜೇಂದ್ರ ಒಡೆಯರ್ ಹೆಸರನ್ನು ಇಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

Last Updated : Jun 28, 2019, 5:35 PM IST

For All Latest Updates

TAGGED:

ABOUT THE AUTHOR

...view details