ಕರ್ನಾಟಕ

karnataka

ನಾನು ಮಂತ್ರಿಯಾಗುವುದು ಡೌಟಾ? ಮರು ಪ್ರಶ್ನೆ ಹಾಕಿದ 'ಹಳ್ಳಿಹಕ್ಕಿ'

By

Published : Aug 17, 2020, 5:56 PM IST

ವಿಧಾನ ಪರಿಷತ್​​ ಸದಸ್ಯ ಹೆಚ್​​. ವಿಶ್ವನಾಥ್​ ಅವರು ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ, ಸಂಸದ ಶ್ರೀನಿವಾಸ್ ಪ್ರಸಾದ್ ಜೊತೆ ಕೆಲ ಕಾಲ ಚರ್ಚಿಸಿದ ಬಳಿಕ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ನಾನು ಮಂತ್ರಿಯಾಗುತ್ತೇನೆ ಎಂಬುದರ ಬಗ್ಗೆ ಅನುವಾನವಿದೆಯಾ ಎಂದು ಮರು ಪ್ರಶ್ನೆ ಹಾಕಿದರು.

h-vishwanath-questioned-media-about-minister-position
ಹೆಚ್ ವಿಶ್ವನಾಥ್

ಮೈಸೂರು: ನಾನು ಮಂತ್ರಿ ಆಗುವುದು ನಿಮಗೆ ಡೌಟಾ..? ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರು ಮಾಧ್ಯಮದವರಿಗೆ ಮರು ಪ್ರಶ್ನೆ ಹಾಕಿದ ಪ್ರಸಂಗ ನಗರದಲ್ಲಿ ನಡೆಯಿತು.

ಇಂದು ಮೈಸೂರಿಗೆ ಆಗಮಿಸಿದ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಜೊತೆ ಸಂಸದ ಶ್ರೀನಿವಾಸ್ ಪ್ರಸಾದ್, ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಗೌಪ್ಯ ಮಾತುಕತೆ ನಡೆಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿ, ಇವತ್ತು ಬಿಜೆಪಿ ಉಪಾಧ್ಯಕ್ಷರಾಗಿ ಆಯ್ಕೆಯಾದ ನಂತರ ವರುಣ ಕಾರ್ಯಕರ್ತರ ಸಭೆ ನಡೆಸಲು ವಿಜಯೇಂದ್ರ ಆಗಮಿಸಿದ್ದು, ಇಲ್ಲಿ ಬೇರೆ ಉದ್ದೇಶ ಇಲ್ಲವೆಂದು ತಿಳಿಸಿದರು.

ಬಿಎಸ್​ವೈ ಸರ್ಕಾರದಲ್ಲಿ ಮಂತ್ರಿಯಾಗುವ ನಿರೀಕ್ಷೆಯಲ್ಲಿ ಹೆಚ್​ ವಿಶ್ವನಾಥ್​

ಶ್ರೀನಿವಾಸ್ ಪ್ರಸಾದ್ ಮನೆಯಲ್ಲಿ ಮಂತ್ರಿ ಮಂಡಲದ ವಿಷಯ ಚರ್ಚೆಯಾಗಿಲ್ಲ. ಮಂತ್ರಿಯಾಗುವ ಬಗ್ಗೆ ನಂಬಿಕೆ ಇದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ, ರಾಜಕಾರಣದಲ್ಲಿ ಹೀಗೆ ಆಗುತ್ತದೆ, ಹಾಗೆ ಆಗುತ್ತದೆ ಎಂದು ಹೇಳುವುದಕ್ಕೆ ಆಗಲ್ಲ. ನಾನು ಮಂತ್ರಿ ಆಗುವುದು ನಿಮಗೇ ಡೌಟಾ ಎಂದು ಮರು ಪ್ರಶ್ನೆ ಹಾಕಿದರು.

ಶಾಸಕ ಸಾ.ರಾ. ಮಹೇಶ್ ಅವರು ಹೆಚ್​ ವಿಶ್ವನಾಥ್ ಭಿಕ್ಷುಕ ಎಂಬ ಪದ ಬಳಕೆ ಕುರಿತು, ನಾನು ಉತ್ತರಿಸುವುದಿಲ್ಲ. ಕೊಚ್ಚೆಗುಂಡಿಗೆ ಕಲ್ಲು ಎಸೆದು ನನ್ನ ಶುಭ್ರ ಬಟ್ಟೆಯನ್ನು ಕೊಳಕು ಮಾಡಿಕೊಳ್ಳುವುದಕ್ಕೆ ಇಷ್ಟವಿಲ್ಲವೆಂದು ಟಾಂಗ್​​​ ನೀಡಿದರು.

For All Latest Updates

ABOUT THE AUTHOR

...view details