ಕರ್ನಾಟಕ

karnataka

ETV Bharat / city

ಮಾಜಿ ಸ್ಪೀಕರ್ ಕೆಆರ್‌ಪೇಟೆ ಕೃಷ್ಣ ನಿಧನ - ಮಾಜಿ ಸ್ಪೀಕರ್ ನಿಧನ

ಮಾಜಿ ಸ್ಪೀಕರ್ ಕೆಆರ್‌ಪೇಟೆ ಕೃಷ್ಣ ಅವರು ಮೈಸೂರಿನ ನಿವಾಸದಲ್ಲಿ ಇಂದು ನಿಧನರಾಗಿದ್ದಾರೆ. ಹಲವು ದಿನಗಳಿಂದ ಅವರು ಲಿವರ್ ಕ್ಯಾ‌ನ್ಸರ್‌ನಿಂದ ಬಳಲುತ್ತಿದ್ದರು.

ಮಾಜಿ ಸ್ಪೀಕರ್ ಕೆಆರ್‌ಪೇಟೆ ಕೃಷ್ಣ ನಿಧನ
ಮಾಜಿ ಸ್ಪೀಕರ್ ಕೆಆರ್‌ಪೇಟೆ ಕೃಷ್ಣ ನಿಧನ

By

Published : May 21, 2021, 4:29 PM IST

ಮಂಡ್ಯ: ಹಲವು ದಿನಗಳಿಂದ ಲಿವರ್ ಕ್ಯಾ‌ನ್ಸರ್‌ನಿಂದ ಬಳಲುತ್ತಿದ್ದ ಮಾಜಿ ಸ್ಪೀಕರ್ ಕೆಆರ್‌ಪೇಟೆ ಕೃಷ್ಣ (80) ಅವರು ಮೈಸೂರಿನ ನಿವಾಸದಲ್ಲಿ ಇಂದು ನಿಧನರಾಗಿದ್ದಾರೆ.

ಲಿವರ್ ಕ್ಯಾನ್ಸರ್​ ಚಿಕಿತ್ಸೆಗೆಂದು ಅವರನ್ನು ಚೆನ್ನೈಗೂ ಸಹ ಕರೆದೊಯ್ದಿದ್ದರು. ಆದ್ರೆ ಚಿಕಿತ್ಸೆಗೆ ಸ್ಪಂದಿಸಿದ ಕಾರಣ ಕೃಷ್ಣ ಅವರನ್ನು ಮೈಸೂರಿನ‌ ಕುವೆಂಪು ನಗರದ ನಿವಾಸಕ್ಕೆ ಕರೆತರಲಾಗಿತ್ತು.

ಮಾಜಿ ಸ್ಪೀಕರ್ ಕೆಆರ್‌ಪೇಟೆ ಕೃಷ್ಣ ನಿಧನ

ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ಕೃಷ್ಣ ಅವರ ಸ್ವಗ್ರಾಮ ಕೊತ್ತಮಾರನಹಳ್ಳಿ ಗ್ರಾಮದಲ್ಲಿ ನಾಳೆ ಬೆಳಗ್ಗೆ ಅಂತ್ಯಸಂಸ್ಕಾರ ನೆರವೇರಲಿದೆ.

ಇವರು ಮೂರು ಬಾರಿ ಕೆಆರ್‌ಪೇಟೆ ಕ್ಷೇತ್ರದಿಂದ ಶಾಸಕರಾಗಿದ್ದು, 1996ರಲ್ಲಿ ಮಂಡ್ಯದ ಸಂಸದರೂ ಸಹ ಆಗಿದ್ದರು. 1988ರಲ್ಲಿ ಬೊಮ್ಮಾಯಿ ಅವರ ಸಂಪುಟದಲ್ಲಿ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾಗಿ ಹಾಗೂ 2006 ರಿಂದ 2008ರ ವರೆಗೆ ವಿಧಾನಸಭೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು.

ABOUT THE AUTHOR

...view details