ಕರ್ನಾಟಕ

karnataka

ETV Bharat / city

ವಜ್ಯಜೀವಿಗಳ ಉಪಟಳಕ್ಕೆ ಬ್ರೇಕ್​... ಇಲ್ಲಿ ಅರಣ್ಯ ಇಲಾಖೆ ಮಾಡಿದ್ದೇನು ಗೊತ್ತಾ? - undefined

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿರುವ ಆಧಿದೇವತೆ ಮಾಸ್ತಮ್ಮ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಕಾಡು ಪ್ರಾಣಿಗಳ ಉಪಟಳ ತಪ್ಪಿಸಲು ಅರಣ್ಯ ಇಲಾಖೆಯವರು ಟ್ರೆಂಚ್​ ನಿರ್ಮಿಸಿದ್ದಾರೆ.

ಟ್ರಂಚ್ ನಿರ್ಮಿಸಿದ ಅರಣ್ಯ ಇಲಾಖೆ

By

Published : Jul 19, 2019, 9:37 PM IST

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಅರಣ್ಯ ಇಲಾಖೆಯವರು ಅನಾಹುತಗಳು ಸಂಭವಿಸುವ ಮುನ್ನವೇ ಎಚ್ಚೆತ್ತುಕೊಂಡಿದ್ದಾರೆ. ಆಧಿದೇವತೆ ಮಾಸ್ತಮ್ಮ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಕಾಡು ಪ್ರಾಣಿಗಳ ಉಪಟಳ ತಪ್ಪಿಸಲು ಟ್ರೆಂಚ್​ ನಿರ್ಮಿಸಿರುವುದಕ್ಕೆ ಜನ ಮೆಚ್ಚು ವ್ಯಕ್ತಪಡಿಸಿದ್ದಾರೆ.

ಹೆಚ್.ಡಿ‌. ಕೋಟೆ ತಾಲೂಕಿನ ಡಿ.ಬಿ. ಕುಪ್ಪೆ ಅರಣ್ಯ ವಲಯದ ಮಾಸ್ತಮ್ಮ ಗುಡಿಗೆ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಬರುತ್ತಾರೆ. ಅಲ್ಲದೇ ಸಿನಿಮಾ ಚಿತ್ರೀಕರಣ ಕೂಡ ಇಲ್ಲಿ ಜರುಗುತ್ತದೆ. ಆಗ ಈ ದೇವಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಾರೆ.

ಟ್ರೆಂಚ್​ ನಿರ್ಮಿಸಿದ ಅರಣ್ಯ ಇಲಾಖೆ

ಇಲ್ಲಿ ಆನೆ, ಹುಲಿ, ಚಿರತೆ, ಕಾಡುಕೋಣ ಹಲವು ಕಾಡು ಪ್ರಾಣಿಗಳು ಕಾಣಿಸಿಕೊಂಡು ಅಪಾಯ ಉಂಟು ಮಾಡುತ್ತವೆ. ಭಕ್ತರು ನೀಡುವ ತಿಂಡಿಗಾಗಿ ಜಿಂಕೆಗಳು ಬರುತ್ತಿದ್ದವು. ಇದರಿಂದ ಎಷ್ಟೋ ಜಿಂಕೆಗಳು ಅಪಘಾತಕ್ಕೆ ಸಿಲುಕಿವೆ.

ಕಾಡು ಪ್ರಾಣಿಗಳ ಉಪಟಳ ಹಾಗೂ ಅವುಗಳ ರಕ್ಷಿಸುವ ಸಲುವಾಗಿ ಮತ್ತು ಭಕ್ತರಿಗೆ ತೊಂದರೆಯಾಗದಂತೆ ಒಂದು ಕಿ.ಮೀ.ನಷ್ಟು ಉದ್ದದ ಟ್ರೆಂಚ್​ ನಿರ್ಮಿಸಿ ಅನಾಹುತಗಳನ್ನು ತಪ್ಪಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details