ಮೈಸೂರು: ಡಿ.ಕೆ ಶಿವಕುಮಾರ್ ಟ್ರಬಲ್ ಶೂಟರ್ ಅಂತ ಹೇಳ್ಕೊಂಡು ಅವರನ್ನ ಅವ್ರೇ ರಾಕ್ಷಸರ ರೀತಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಕೆ.ಎಸ್ ಈಶ್ವರಪ್ಪ ಟೀಕಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಹಾಗು ಜೆಡಿಎಸ್ ಹೆಚ್ಚು ಸ್ಥಾನ ಗೆಲ್ಲುತ್ತೆ ಅಂತಿದ್ರು. ಆದ್ರೆ, ಜನ ಮೈತ್ರಿ ಪಕ್ಷಗಳಿಗೆ ತಲಾ ಒಂದೊಂದು ಸ್ಥಾನ ಕೊಟ್ಟರು. ಆದ್ರೂ ಚುನಾವಣೆ ನಂತ್ರ ಅವರ ಬಂಡಾಟ ಮುಂದುವರೆದಿತ್ತು. ಈಗ ಇದಕ್ಕೆಲ್ಲಾ ತಕ್ಕ ಉತ್ತರ ನೀಡಲಾಗಿದೆ. ಜನಾದೇಶ ಇಲ್ಲದಿದ್ದರೂ ಅಧಿಕಾರ ಹಿಡಿಯಲಿಕ್ಕೆ ಹೋಗಿ ಎರಡೂ ಪಕ್ಷಗಳು ಅವಾಂತರ ಸೃಷ್ಟಿ ಮಾಡಿವೆ ಎಂದರು.