ಮೈಸೂರು:ಉತ್ತರ ಕರ್ನಾಟಕ, ಕೊಡಗು ಹಾಗೂ ಮೈಸೂರು ಭಾಗದ ನೆರೆ ಸಂತ್ರಸ್ತರಿಗಾಗಿ ಬೀದಿ ಬದಿ ವ್ಯಾಪಾರಿಗಳು, ದೇವರಾಜ ಮಾರುಕಟ್ಟೆಯ ಅಂಗಡಿಗಳ ಮಾಲೀಕರು ದೇಣಿಗೆ ನೀಡುವ ಮೂಲಕ ಮಾನವೀಯತೆಗೆ ಕೈ ಜೋಡಿಸಿದ್ದಾರೆ.
ಸಂತ್ರಸ್ತರಿಗಾಗಿ ಅಂಗಡಿ, ಬೀದಿ ವ್ಯಾಪಾರಿಗಳಿಂದ ದೇಣಿಗೆ ಸಂಗ್ರಹಿಸಿದ ಬಿಜೆಪಿ
ಉತ್ತರ ಕರ್ನಾಟಕ, ಕೊಡಗು ಹಾಗೂ ಮೈಸೂರು ಭಾಗದ ನೆರೆ ಸಂತ್ರಸ್ತರಿಗಾಗಿ ನಗರ ಬಿಜೆಪಿ ಘಟಕದ ವತಿಯಿಂದ ದೇಣಿಗೆ ಸಂಗ್ರಹಿಸಲಾಯಿತು.
BJP collects donations from shopkeepers and street vendors for residents
ನಗರ ಬಿಜೆಪಿ ಘಟಕದ ವತಿಯಿಂದ ನೆರೆ ಪೀಡಿತ ಸಂತ್ರಸ್ತರಿಗೆ ಸಹಾಯ ಮಾಡಲು ದೇವರಾಜ ಮಾರುಕಟ್ಟೆ, ರಸ್ತೆ ಬದಿ ವ್ಯಾಪಾರಿಗಳು, ದೇವರಾಜ ಅರಸು ರಸ್ತೆ ಸೇರಿದಂತೆ ಹಲವೆಡೆ ದೇಣಿಗೆ ಸಂಗ್ರಹಿಸಲಾಯಿತು.
ಶಾಸಕರಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ಮುಖಂಡರಾದ ತೋಂಟದಾರ್ಯ, ರಾಜೀವ್, ಸಂದೇಶ್ ಸ್ವಾಮಿ ಸೇರಿದಂತೆ ಹಲವಾರು ಮಂದಿ ದೇಣಿಗೆ ಸಂಗ್ರಹದಲ್ಲಿ ಪಾಲ್ಗೊಂಡಿದ್ದರು.