ಕರ್ನಾಟಕ

karnataka

ಹಸಿರು ಕಾನನದಲ್ಲಿ ನಿಶ್ಚಿಂತೆಯಿಂದ ಕಾಲ ಕಳೆಯುತ್ತಿರುವ 'ಅರ್ಜುನ'.. ದಸರಾಗೆ ಗೈರು

By

Published : Sep 20, 2020, 5:07 PM IST

60 ವರ್ಷದ ಪೂರೈಸಿದ ಆನೆಗಳು ಭಾರ ಹೊರುವ ಕೆಲಸ ಕೊಡಬಾರದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಹೀಗಾಗಿ, ಅರ್ಜುನ ಆನೆಯನ್ನು ಈ ಬಾರಿ ಮೈಸೂರು ದಸರಾಗೆ ಕರೆಸಿಕೊಳ್ಳುತ್ತಿಲ್ಲ..

Arjuna elephant spending time in the green forest
ಹಸಿರು ಕಾನನದಲ್ಲಿ ನಿಶ್ಚಿತೆಯಿಂದ ಕಾಲ ಕಳೆಯುತ್ತಿರುವ ಅರ್ಜುನ ಆನೆ

ಮೈಸೂರು :ಈ ಹಿಂದೆ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಅಂಬಾರಿ ಹೊರುತ್ತಿದ್ದ ಅರ್ಜುನ ಆನೆಗೆ 60 ವರ್ಷವಾಗಿರುವುದರಿಂದ ವಿಶ್ರಾಂತಿ ನೀಡಲಾಗಿದೆ. ಹಾಗಾಗಿ ಅರ್ಜುನ ಹಸಿರು ಕಾನನದಲ್ಲಿ ಸ್ವಚ್ಛಂದವಾಗಿದ್ದಾನೆ‌.

ಹಸಿರು ಕಾನನದಲ್ಲಿ ನಿಶ್ಚಿಂತೆಯಿಂದ ಕಾಲ ಕಳೆಯುತ್ತಿರುವ ಅರ್ಜುನ..

ಇದೀಗ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಬಳ್ಳೆ ಶಿಬಿರದಲ್ಲಿರುವ ಮಾಜಿ ಕ್ಯಾಪ್ಟನ್​ ಅರ್ಜುನ, ಕಾಡಿನ ಆಹಾರ ತಿನ್ನುತ್ತಾ ನಿಶ್ಚಿಂತೆಯಿಂದ ಸಮಯ ಕಳೆಯುತ್ತಿದ್ದಾನೆ.

60 ವರ್ಷದ ಪೂರೈಸಿದ ಆನೆಗಳು ಭಾರ ಹೊರುವ ಕೆಲಸ ಕೊಡಬಾರದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಹೀಗಾಗಿ, ಅರ್ಜುನ ಆನೆಯನ್ನು ಈ ಬಾರಿ ಮೈಸೂರು ದಸರಾಗೆ ಕರೆಸಿಕೊಳ್ಳುತ್ತಿಲ್ಲ.

ABOUT THE AUTHOR

...view details