ಕರ್ನಾಟಕ

karnataka

By

Published : Jul 15, 2021, 9:24 PM IST

Updated : Jul 15, 2021, 10:27 PM IST

ETV Bharat / city

ಹೋಟೆಲ್​ನಲ್ಲಿ ಗಲಾಟೆ ಕೇಸ್: ಸಂದೇಶ್ ನಾಗರಾಜ್ ಜೊತೆ ಮಾತುಕತೆ ನಡೆಸಿ ತೆರಳಿದ ದರ್ಶನ್

ಹೋಟೆಲ್​​ ಸಪ್ಲೈಯರ್​ ಮೇಲೆ ನಟ ದರ್ಶನ್​ ಹಾಗೂ ಅವರ ಗೆಳೆಯರಿಂದ ಹಲ್ಲೆ ವಿಚಾರಕ್ಕೆ ಸಂಬಂಧಿಸಿ ಸಂದೇಶ್​ ನಾಗರಾಜ್​ ಅವರನ್ನು ಮಾತನಾಡಿಸಲು ದರ್ಶನ್​​ ಸಂದೇಶ್​​ ದಿ ಪ್ರಿನ್ಸ್​​ ಹೋಟೆಲ್​ ಆಗಮಿಸಿದ್ದರು.

actor-darshan
ನಟ ದರ್ಶನ್

ಮೈಸೂರು: ಹೋಟೆಲ್​ನಲ್ಲಿ ದರ್ಶನ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂದೇಶ್ ನಾಗರಾಜ್ ಅವರನ್ನು ಮಾತನಾಡಿಸಲು ನಟ ದರ್ಶನ್ ಸಂದೇಶ್ ದಿ ಪ್ರಿನ್ಸ್ ಹೋಟೆಲ್ಗೆ ಆಗಮಿಸಿದ್ದರು.

ಈ ವೇಳೆ ಸ್ವತಃ ನಟ ದರ್ಶನ್‌ರನ್ನು ಹೋಟೆಲ್ ಮಾಲೀಕ ಸಂದೇಶ್ ನಾಗರಾಜ್ ಪುತ್ರ ಸಂದೇಶ್ ಬರಮಾಡಿಕೊಂಡರು. ಬಳಿಕ ಒಂದು ಗಂಟೆಯ ಕಾಲ ಮಾತುಕತೆ ನಡೆಸಿದರು. ಮಾತುಕತೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ, ನಾಳೆ ಮಾತನಾಡುತ್ತೇನೆ ಎಂದು ಹೇಳಿ ದರ್ಶನ್ ಹೋದರು.

ದರ್ಶನ್ ಗಲಾಟೆ ಬಗ್ಗೆ ಬೆಳಿಗ್ಗೆಯಿಂದಲೂ ಸುದ್ದಿಯಾಗಿತ್ತು. ಸಂದೇಶ್ ಪ್ರಿನ್ಸ್ ಹೋಟೆಲ್ ಬಿಟ್ಟು ಬೇರೆಡೆ ಪ್ರೆಸ್‌ಮೀಟ್ ನಡೆಸಿದ್ದಾರೆ ಎಂಬ ಗೊಂದಲಗಳಿದ್ದವು. ಸದ್ಯ ಎಲ್ಲಾ ಪ್ರಕರಣಗಳಿಗೆ ತೆರೆ ಎಳೆಯಲು ದರ್ಶನ್ ಬಂದಿದ್ದಾರೆ ಎನ್ನಲಾಗಿದೆ.

ಸಂದೇಶ್ ನಾಗರಾಜ್ ಮಾತನಾಡಿಸಲು ಆಗಮಿಸಿದ ದರ್ಶನ್

ಸಾಲ ವಂಚನೆ ಪ್ರಕರಣದ ನಡುವೆ ಎಂಟ್ರಿ ಕೊಟ್ಟಿರುವ ಇಂದ್ರಜಿತ್​ ಲಂಕೇಶ್​, ಮೈಸೂರಿನ ಸಂದೇಶ ಹೊಟೇಲ್​ನಲ್ಲಿ ನಟ ದರ್ಶನ್ ಕಡೆಯವರು ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ಸಮಯದಲ್ಲಿ ಪವಿತ್ರಾ ಗೌಡ, ರಾಕೇಶ್ ಶರ್ಮಾ, ಹರ್ಷ ಮೆಲೋಂಟಾ, ರಾಕೇಶ್ ಪಾಪಣ್ಣ ಇದ್ದರು. ಘಟನೆಯಾದ ಒಂದು ದಿನದ ನಂತರ ದಲಿತ ಯುವಕನಿಗೆ ದುಡ್ಡು ಕೊಟ್ಟು ಸುಮ್ಮನಿರಿಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದರು.

Last Updated : Jul 15, 2021, 10:27 PM IST

ABOUT THE AUTHOR

...view details