ಕರ್ನಾಟಕ

karnataka

ETV Bharat / city

ಮೈಸೂರಿನಲ್ಲಿ ಶೇ.30ರಷ್ಟು ಸಾರಿಗೆ ಬಸ್ ಸಂಚಾರ : ಹೇಮಂತ್ ಕುಮಾರ್ - Transport start in mysure

ಗ್ರಾಮಾಂತರ ಬಸ್​ ಸಂಚಾರ ಎರಡು ತಿಂಗಳಿನಿಂದ ನಿಂತ ಹಿನ್ನೆಲೆ ಕೋಟ್ಯಂತರ ರೂ. ನಷ್ಟವಾಗಿದೆ. ಕೋವಿಡ್ ಲಸಿಕೆಯ ಎರಡು ಡೋಸ್​ಗಳನ್ನು ಪಡೆದ ಚಾಲಕರು ಹಾಗೂ ನಿರ್ವಾಹಕರಿಗೆ ಕರ್ತವ್ಯಕ್ಕೆ ಹಾಜರಾಗಲು ಮೊದಲ ಆದ್ಯತೆ ನೀಡಲಾಗುವುದು..

hemanth kumar
ಹೇಮಂತ್ ಕುಮಾರ್

By

Published : Jun 26, 2021, 4:38 PM IST

ಮೈಸೂರು: ಲಾಕ್​ಡೌನ್ ಸಡಿಲಿಕೆ ಹಿನ್ನೆಲೆ ಮೈಸೂರಿನಲ್ಲಿ ಶೇ.30ರಷ್ಟು‌ ಸಾರಿಗೆ ಬಸ್​ಗಳು ಸಂಚಾರ ಮಾಡಲಿವೆ ಎಂದು ಗ್ರಾಮಾಂತರ ಸಾರಿಗೆ ಸಂಚಲನಾಧಿಕಾರಿ ಹೇಮಂತ್ ಕುಮಾರ್ ತಿಳಿಸಿದರು‌. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸೂಚಿಸಿದ ಕೋವಿಡ್ ನಿಯಮಗಳನ್ನು ಪಾಲಿಸಿ, ಬಸ್ ಸಂಚಾರ ಆರಂಭಿಸಲಾಗುವುದು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಚಲನಾಧಿಕಾರಿ ಹೇಮಂತ್ ಕುಮಾರ್

ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ 650 ಬಸ್​ಗಳಿವೆ. ಇದರಲ್ಲಿ ಶೇ.30ರಷ್ಟು ಬಸ್​ಗಳು ಸಂಚಾರ ಮಾಡಲಿವೆ. ಮೊದಲ ಹಂತದಲ್ಲಿ ಬೆಂಗಳೂರು, ಮಡಿಕೇರಿ, ಚಾಮರಾಜನಗರ, ಹಾಸನ ಜಿಲ್ಲೆಗಳಿಗೆ ಸಂಚಾರ ಮಾಡಲಿವೆ. ಅಂತಾರಾಜ್ಯಕ್ಕೆ ಬಸ್ ಸಂಚಾರ ಸದ್ಯಕ್ಕೆ ಇಲ್ಲ ಎಂದರು.

ಗ್ರಾಮಾಂತರ ಬಸ್​ ಸಂಚಾರ ಎರಡು ತಿಂಗಳಿನಿಂದ ನಿಂತ ಹಿನ್ನೆಲೆ ಕೋಟ್ಯಂತರ ರೂ. ನಷ್ಟವಾಗಿದೆ. ಕೋವಿಡ್ ಲಸಿಕೆಯ ಎರಡು ಡೋಸ್​ಗಳನ್ನು ಪಡೆದ ಚಾಲಕರು ಹಾಗೂ ನಿರ್ವಾಹಕರಿಗೆ ಕರ್ತವ್ಯಕ್ಕೆ ಹಾಜರಾಗಲು ಮೊದಲ ಆದ್ಯತೆ ನೀಡಲಾಗುವುದು. ಕೊರೊನಾ ಮೂರನೇ ಅಲೆಗೆ ಸಂಬಂಧಿಸಿದಂತೆ ಮಕ್ಕಳ ನಿಯಂತ್ರಣಕ್ಕೆ ಯಾವುದೇ ಗೈಡ್​ಲೈನ್ಸ್ ಇನ್ನೂ ಬಂದಿಲ್ಲ ಎಂದು ತಿಳಿಸಿದರು.

ABOUT THE AUTHOR

...view details