ಮಂಗಳೂರು: ಸಾಮಾನ್ಯವಾಗಿ ಎಲ್ಲರೂ ತಮ್ಮ ಇಷ್ಟಾರ್ಥ ಈಡೇರಿದ ನಂತರ ಹರಕೆ ತೀರಿಸುತ್ತಾರೆ. ಆದರೆ ಇಲ್ಲೊಬ್ಬರು ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕೆಂದು ಹೇಳಿಕೊಂಡ ಯಕ್ಷಗಾನ ಹರಕೆಯನ್ನು ತೀರಿಸಲು ಫಲಿತಾಂಶ ಬರುವ ಮುನ್ನವೆ ಯಕ್ಷಗಾನಕ್ಕೆ ಬುಕ್ಕಿಂಗ್ ಮಾಡಿದ್ದಾರೆ.
ಹೌದು... ನಗರದ ಟೀಂ ಮೋದಿ ಸದಸ್ಯರು, ಕಳೆದ ವರ್ಷ ಡಿ. 29 ರಂದು ಮಂಗಳೂರಿನ ಮಣ್ಣಗುಡ್ಡೆಯಲ್ಲಿ ಆಯೋಜಿಸಿದ್ದ ಯಕ್ಷಗಾನದ ವೇಳೆ ಮೋದಿ ಮತ್ತೆ ಪ್ರಧಾನಿ ಆಗಬೇಕೆಂದು ಕಟೀಲು ಮೇಳದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಹರಕೆಯನ್ನು ಹೇಳಿಕೊಂಡಿದ್ದರು. ಇದೀಗ ಚುನಾಚಣಾ ಫಲಿತಾಂಶದ ಮರುದಿನವಾದ ಮೇ 24 ರಂದು ನಗರದ ರಥಬೀದಿಯಲ್ಲಿ ನಡೆಯುವ ಯಕ್ಷಗಾನಕ್ಕೆ ಬುಕ್ಕಿಂಗ್ ಮಾಡಿದ್ದು, ಯಕ್ಷಗಾನದ ಕರಪತ್ರವನ್ನು ಜಾಲತಾಣದಲ್ಲಿ ಸಹ ಹರಿಬಿಡುತ್ತಿದ್ದಾರೆ.