ಕರ್ನಾಟಕ

karnataka

By

Published : Jun 24, 2020, 1:25 PM IST

Updated : Jun 24, 2020, 4:00 PM IST

ETV Bharat / city

ಹಜ್​​​​​​​​​​​ಯಾತ್ರೆಗೆ ಕೂಡಿಟ್ಟಿದ್ದ ಹಣದಲ್ಲಿ ಬಡವರಿಗೆ ಸಹಾಯ: ಈ ಕಾರ್ಮಿಕನಿಗೆ ಲಂಡನ್​​ನಿಂದ ನೆರವು

ಕೂಲಿ ಕಾರ್ಮಿಕ ದಂಪತಿ ಹಜ್ ಯಾತ್ರೆಗೆ ಹಲವು ವರ್ಷಗಳಿಂದ ಕೂಡಿಟ್ಟಿದ್ದ ಹಣದಲ್ಲಿ ದಿನಸಿ ವಿತರಿಸಿ ಮಾನವೀಯತೆ ಮೆರೆದಿರುವ ಘಟನೆ ಬಂಟ್ವಾಳದ ಬಿ.ಸಿ.ರೋಡ್‌ನ ಗೂಡಿನಬಳಿ ನಡೆದಿದೆ.

wage workers helped to poor people
ಚೆಕ್​ ವಿತರಣೆ

ಬಂಟ್ವಾಳ (ದಕ್ಷಿಣ ಕನ್ನಡ) : ಕೂಲಿ ಕಾರ್ಮಿಕರೊಬ್ಬರು ಪವಿತ್ರ ಹಜ್ ಯಾತ್ರೆಗೆ ಕೂಡಿಟ್ಟ ಹಣವನ್ನು ತಮ್ಮಂತೆಯೇ ಕಷ್ಟದಲ್ಲಿರುವ ಹಸಿದ ಹೊಟ್ಟೆಗಳಿಗೆ ಆಹಾರ ಸಾಮಗ್ರಿ ವಿತರಿಸಿ ಮಾನವೀಯತೆ ಮೆರೆದ ಸುದ್ದಿ ಈಗ ಗಡಿದಾಟಿ ಲಂಡನ್​​​​ಗೆ ತಲುಪಿದೆ.

ಬಂಟ್ವಾಳ ಬಿ.ಸಿ.ರೋಡ್‌ನ ಗೂಡಿನಬಳಿ ನಿವಾಸಿ ಅಬ್ದುಲ್‌ ರೆಹಮಾನ್‌ ದಂಪತಿ ಬಡವರಿಗೆ ದಿನಸಿ ವಿತರಿಸಿ ಗಮನ ಸೆಳೆದವರು. ಏಪ್ರಿಲ್ 24ರಂದು ಈಟಿವಿ ಭಾರತದಲ್ಲಿ ಈ ಕುರಿತು ವರದಿ ಪ್ರಕಟಗೊಂಡಿತ್ತು. ದಂಪತಿ ಪುತ್ರ ಬಂಟ್ವಾಳ ಬಿ.ಸಿ.ರೋಡ್‌ನ ಗೂಡಿನಬಳಿ ನಿವಾಸಿ ಅಬ್ದುಲ್‌ ರೆಹಮಾನ್‌ ದಂಪತಿ ಬಡವರಿಗೆ ದಿನಸಿ ವಿತರಿಸಿ ಗಮನ ಸೆಳೆದವರು. ಏಪ್ರಿಲ್ 24ರಂದು ಈಟಿವಿ ಭಾರತದಲ್ಲಿ ಈ ಕುರಿತು ವರದಿ ಪ್ರಕಟಗೊಂಡಿತ್ತು. ದಂಪತಿ ಪುತ್ರ ಇಲ್ಯಾಸ್ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದರು.

ಕೂಲಿ ಕಾರ್ಮಿಕ ಅಬ್ದುಲ್​ ರೆಹಮಾನ್​​

ಇದನ್ನು ಓದಿದ ಲಂಡನ್ ನಿವಾಸಿ ಬಿಲಾಲ್ ಚಾವ್ಲಾ ಅವರು ಇಲ್ಯಾಸ್ ಅವರನ್ನು ಸಂಪರ್ಕಿಸಿದರು. ಆಗ ಇಲ್ಯಾಸ್, ತನ್ನ ತಂದೆಗೆ ಹಜ್ ಯಾತ್ರೆಗೆ ಪಾಣಕ್ಕಾಡ್ ಸಯ್ಯದ್ ಮನವ್ವರ್ ಅಲಿ ಶಿಯಾಬ್ ತಂಙಳರು ನೆರವು ನೀಡಿದ ಬಗ್ಗೆ ತಿಳಿಸಿದ್ದಾರೆ.

ಚೆಕ್​ ವಿತರಣೆ

ಈ ವೇಳೆ ಬಿಲಾಲ್ ಅವರು, ಇಲ್ಯಾಸ್ ಅವರ ತಂದೆ-ತಾಯಿಗೆ ಹಜ್ ಯಾತ್ರೆಗೆ ನೆರವು ನೀಡುವುದಾಗಿ ತಿಳಿಸಿದ್ದರು. ಬಿಲಾಲ್​ ಅವರು ರೆಹಮಾನ್​ ಅವರ ಪುತ್ರನ ಸ್ನೇಹಿತ ಆಸಿಫ್ ಬಜ್ಪೆ ಮುಖಾಂತರ ಹಣ ಕಳುಹಿಸಿಕೊಟ್ಟಿದ್ದಾರೆ. ಅದನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಸದಸ್ಯರು ಅಬ್ದುಲ್ ರೆಹಮಾನ್ ಕುಟುಂಬಕ್ಕೆ ತಲುಪಿಸಿದರು.

ಬಡವರಿಗೆ ವಿತರಿಸಲು ದಿನಸಿ ಸಂಗ್ರಹಿಸಿರುವ ಅಬ್ದುಲ್‌ ರೆಹಮಾನ್
Last Updated : Jun 24, 2020, 4:00 PM IST

ABOUT THE AUTHOR

...view details