ಮಂಗಳೂರು:ಸಮುದ್ರ ಪಾಲಾಗುತ್ತಿದ್ದ ಇಬ್ಬರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಪಣಂಬೂರು ಬೀಚ್ನಲ್ಲಿ ನಡೆದಿದೆ.
ಮೂಲತಃ ಕೊಪ್ಪಳದ ನಿವಾಸಿಗಳಾದ, ಪ್ರಸ್ತುತ ಮಂಗಳೂರಿನ ಕೂಳೂರು ಸಮೀಪದ ಪಂಜಿಮೊಗರಿನಲ್ಲಿ ವಾಸಿಸುತ್ತಿರುವ ಮಲ್ಲೇಶ್ (18) ಹಾಗೂ ಮಂಜುನಾಥ್ (17) ಅಪಾಯದಿಂದ ಪಾರಾದವರು.
ಸಮುದ್ರದಲ್ಲಿ ಆಟವಾಡುತ್ತಿದ್ದ ಸಂದರ್ಭ ಘಟನೆ ನಡೆದಿದ್ದು, ತಕ್ಷಣ ಲೈಫ್ ಗಾರ್ಡ್ ಸಿಬ್ಬಂದಿ ಇಬ್ಬರನ್ನೂ ರಕ್ಷಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಪ್ರಮೋದ್, ಅಭಿಜಿತ್, ನಿಖಿಲ್, ಸೋನು, ಫ್ರಾನ್ಸಿಸ್ ಇದ್ದರು.