ಕರ್ನಾಟಕ

karnataka

ಮಂಗಳೂರಿನಲ್ಲಿ ಸಮುದ್ರಪಾಲಾಗುತ್ತಿದ್ದ ಇಬ್ಬರ ರಕ್ಷಣೆ

By

Published : Mar 17, 2019, 11:05 PM IST

ಪಣಂಬೂರು ಬೀಚ್​ನಲ್ಲಿ ಸಮುದ್ರದಲ್ಲಿ ಆಟವಾಡುತ್ತಿದ್ದ ವೇಳೆ ನೀರು ಪಾಲಾಗುತ್ತಿದ್ದ ಇಬ್ಬರನ್ನು ಲೈಫ್ ಗಾರ್ಡ್ ಸಿಬ್ಬಂದಿ​ಗಳು ರಕ್ಷಿಸಿದ್ದಾರೆ.

ಪಣಂಬೂರು ಬೀಚ್​

ಮಂಗಳೂರು:ಸಮುದ್ರ ಪಾಲಾಗುತ್ತಿದ್ದ ಇಬ್ಬರನ್ನು ಲೈಫ್ ಗಾರ್ಡ್ ಸಿಬ್ಬಂದಿ​ ರಕ್ಷಣೆ ಮಾಡಿದ ಘಟನೆ ಪಣಂಬೂರು ಬೀಚ್​ನಲ್ಲಿ ನಡೆದಿದೆ.

ಮೂಲತಃ ಕೊಪ್ಪಳದ ನಿವಾಸಿಗಳಾದ, ಪ್ರಸ್ತುತ ಮಂಗಳೂರಿನ ಕೂಳೂರು ಸಮೀಪದ ಪಂಜಿಮೊಗರಿನಲ್ಲಿ ವಾಸಿಸುತ್ತಿರುವ ಮಲ್ಲೇಶ್ (18) ಹಾಗೂ ಮಂಜುನಾಥ್ (17) ಅಪಾಯದಿಂದ ಪಾರಾದವರು.

ಸಮುದ್ರದಲ್ಲಿ ಆಟವಾಡುತ್ತಿದ್ದ ಸಂದರ್ಭ ಘಟನೆ ನಡೆದಿದ್ದು, ತಕ್ಷಣ ಲೈಫ್ ಗಾರ್ಡ್ ಸಿಬ್ಬಂದಿ​ ಇಬ್ಬರನ್ನೂ ರಕ್ಷಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಪ್ರಮೋದ್, ಅಭಿಜಿತ್, ನಿಖಿಲ್, ಸೋನು, ಫ್ರಾನ್ಸಿಸ್ ಇದ್ದರು.

For All Latest Updates

TAGGED:

ABOUT THE AUTHOR

...view details