ಕರ್ನಾಟಕ

karnataka

By

Published : Oct 31, 2019, 11:47 PM IST

ETV Bharat / city

ಯಾವುದೇ ಕಾರಣಕ್ಕು ಟಿಪ್ಪು ಜಯಂತಿ ಆಚರಿಸುವ ಮಾತೇ ಇಲ್ಲ: ಡಿಸಿಎಂ ಅಶ್ವತ್ಥ ನಾರಾಯಣ್

ಟಿಪ್ಪು ಜಯಂತಿಯ ಬಗ್ಗೆ ಯಾವುದೇ ವಿವಾದವಿಲ್ಲ‌ ನಾವು ಸ್ಪಷ್ಟವಾಗಿದ್ದು, ಟಿಪ್ಪುವಿನಂತಹ ಮತಾಂಧ ವ್ಯಕ್ತಿಯ ಜಯಂತಿಯನ್ನು ಯಾವುದೇ ಕಾರಣಕ್ಕೂ ಆಚರಿಸೋದಿಲ್ಲ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಸ್ಪಷ್ಟಪಡಿಸಿದ್ದಾರೆ.

ಯಾವುದೇ ಕಾರಣಕ್ಕು ಟಿಪ್ಪು ಜಯಂತಿ ಆಚರಿಸುವ ಮಾತೇ ಇಲ್ಲ: ಡಿಸಿಎಂ ಅಶ್ವತ್ಥ ನಾರಾಯಣ್

ಮಂಗಳೂರು:ಟಿಪ್ಪು ಜಯಂತಿಯ ಬಗ್ಗೆ ಯಾವುದೇ ವಿವಾದವಿಲ್ಲ‌. ಈ ವಿಷಯದಲ್ಲಿ ನಮ್ಮ ನಿಲುವು ಅಚಲವಾಗಿದ್ದು, ಟಿಪ್ಪುವಿನಂತಹ ಮತಾಂಧ ವ್ಯಕ್ತಿಯ ಜಯಂತಿಯನ್ನು ನಾವು ಯಾವುದೇ ಕಾರಣಕ್ಕೂ ಆಚರಿಸುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಹೇಳಿದ್ದಾರೆ.

ಯಾವುದೇ ಕಾರಣಕ್ಕು ಟಿಪ್ಪು ಜಯಂತಿ ಆಚರಿಸುವ ಮಾತೇ ಇಲ್ಲ: ಡಿಸಿಎಂ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಟಿಪ್ಪು ಜಯಂತಿಯ ಮೂಲಕ ಮತ ಬ್ಯಾಂಕ್ ನಡೆಸುತ್ತಿದೆ. ಅಲ್ಲದೆ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಇಂತಹ ಜಯಂತಿಯ ಮೂಲಕ ಸಮಾಜದಲ್ಲಿನ ಸಾಮರಸ್ಯ, ಸೌಹಾರ್ದತೆಯನ್ನು ಹಾಳು ಮಾಡಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭ ಐಡಿಯಲ್ ಐಸ್ ಕ್ರೀಂ ಬಗ್ಗೆ ಮಾತನಾಡಿದ ಅವರು, ನಾನು 1988-94ರವರೆಗೆ ಮೆಡಿಕಲ್ ವಿದ್ಯಾರ್ಥಿಯಾಗಿ ಮಂಗಳೂರು ಕೆಎಂಸಿಯಲ್ಲಿ ಅಧ್ಯಯನ ಮಾಡುತ್ತಿರುವಾಗ ಸಾಕಷ್ಟು ಬಾರಿ ಐಡಿಯಲ್ ಗೆ ಬಂದು ಐಸ್ ಕ್ರೀಂ ಸವಿಯುತ್ತಿದ್ದೆ. ಫ್ಯಾರಾಫಿಟ್, ದಿಲ್ ಕುಶ್, ಗಡಬಡ್ ಐಸ್ ಕ್ರೀಂ ಗಳನ್ನು ಸವಿಯಲೆಂದೇ ಇಲ್ಲಿಗೆ ಬರುತ್ತಿದ್ದೆ. ಈ ಆಕರ್ಷಣೆ ಇಂದಿಗೂ ಹೋಗಿಲ್ಲ. ಹಾಗಾಗಿ ಮಂಗಳೂರಿಗೆ ಬಂದಾಗಲೆಲ್ಲಾ ಐಡಿಯಲ್ ಐಸ್ ಕ್ರೀಂ ಪಾರ್ಲರ್ ನೆನಪಾಗುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ಈ ಸಂಸ್ಥೆಯ ಮಾಲೀಕರೊಂದಿಗೆ ಉತ್ತಮ ಸಂಬಂಧವಿದೆ. ಹಾಗಾಗಿ ಮಂಗಳೂರಿಗೆ ಬಂದಾಗ ಐಡಿಯಲ್ ಗೆ ಬಂದು ಹೋಗೋದು ವಾಡಿಕೆಯಾಗಿದೆ ಎಂದು ಹೇಳಿದರು.



ABOUT THE AUTHOR

...view details