ಕರ್ನಾಟಕ

karnataka

ETV Bharat / city

ಗಬ್ಬೆದ್ದು ನಾರುತ್ತಿದೆ ಬಂಟ್ವಾಳದ ಬಸ್ ನಿಲ್ದಾಣ, ವಾಣಿಜ್ಯ ಸಂಕೀರ್ಣ - The negligence of the authorities

ಬಿ.ಸಿ. ರೋಡ್​​​ನಲ್ಲಿರುವ ಬಸ್ ನಿಲ್ದಾಣ ಹಾಗೂ ವಾಣಿಜ್ಯ ಸಂಕೀರ್ಣ ಅಸ್ವಚ್ಛತೆಯಿಂದ ಕೂಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

The negligence of the authorities
ಅಸ್ವಚ್ಛತೆಯಿಂದ ಕೂಡಿರುವ ಬಸ್ ನಿಲ್ದಾಣ, ವಾಣಿಜ್ಯ ಸಂಕೀರ್ಣ

By

Published : Mar 20, 2020, 9:10 PM IST

ಮಂಗಳೂರು:ಅಧಿಕಾರಿಗಳ ಬೇಜವಾಬ್ದಾರಿತನದಿಂದಬಂಟ್ವಾಳದ ಬಿ.ಸಿ. ರೋಡ್​​​ನಲ್ಲಿ ನಿರ್ಮಿಸಿರುವ ಬಸ್ ನಿಲ್ದಾಣ ಹಾಗೂ ವಾಣಿಜ್ಯ ಸಂಕೀರ್ಣ ಅಸ್ವಚ್ಛತೆಯಿಂದ ಕೂಡಿವೆ. ಸಂಕೀರ್ಣದ ಮೇಲ್ಭಾಗದಲ್ಲಿ ಪಾಚಿ ಕಟ್ಟಿ ನೀರು ನಿಂತು ಗಬ್ಬೆದ್ದು ನಾರುತ್ತಿದೆ.

ಇಲ್ಲಿ ನ್ಯಾಯಾಲಯ ಸಂಕೀರ್ಣದಿಂದ ಮಿನಿ ವಿಧಾನಸೌಧಕ್ಕೆ ತೆರಳುವ ಜಾಗದಲ್ಲಿ ಚರಂಡಿ ಸ್ವಚ್ಛಗೊಳಿಸದ ಕಾರಣ ನೀರು ನಿಂತಲ್ಲೇ ನಿಂತಿದೆ. ಸಂಕೀರ್ಣ ಮತ್ತು ಚರಂಡಿಯನ್ನು ಸ್ಪಚ್ಛಗೊಳಿಸಿ ವರ್ಷವೇ ಕಳೆಯಿತು. ಇದರಿಂದಾಗಿ ಸೊಳ್ಳೆಕಾಟ ಹೆಚ್ಚಾಗಿದೆ ಎಂದು ಆರೋಪಿಸುತ್ತಾರೆ ಸ್ಥಳೀಯರು.

ಅಸ್ವಚ್ಛತೆಯಿಂದ ಕೂಡಿರುವ ಬಸ್ ನಿಲ್ದಾಣ, ವಾಣಿಜ್ಯ ಸಂಕೀರ್ಣ

ಈ ಕುರಿತು ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ, ಸ್ಥಳೀಯರು ಈ ಕುರಿತು ಗಮನಕ್ಕೆ ತಂದಿದ್ದಾರೆ. ವಾರದೊಳಗೆ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದರು.

ABOUT THE AUTHOR

...view details