ಕರ್ನಾಟಕ

karnataka

ರೌಡಿಶೀಟರ್ ರಾಜ ಹತ್ಯೆ ಪ್ರಕರಣ: ಪ್ರಮುಖ ಆರೋಪಿಗಳಿಗೆ ಸಹಕರಿಸಿದ 9 ಮಂದಿ ಬಂಧನ

By

Published : Jun 13, 2022, 9:57 AM IST

Updated : Jun 13, 2022, 10:08 AM IST

ಮಂಗಳೂರಿನ ರೌಡಿಶೀಟರ್ ರಾಜ ಹತ್ಯೆ ಪ್ರಕರಣ ಸಂಬಂಧ 9 ಜನರನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ‌.

Mangalore
ಬಂಧಿತ ಆರೋಪಿಗಳು

ಮಂಗಳೂರು:ನಗರದ ಬೈಕಂಪಾಡಿಯ ಮೀನಕಳಿಯದಲ್ಲಿ ನಡೆದಿರುವ ರೌಡಿ ಶೀಟರ್ ರಾಜ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಿಗೆ ಸಹಕರಿಸಿರುವ 9 ಮಂದಿ ಆರೋಪಿಗಳನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ‌.

ಸುರತ್ಕಲ್ ಇಡ್ಯಾ ನಿವಾಸಿ ಚೊಟ್ಟೆ ಸಂದೀಪ್(45), ತೋಟ ಬೇಂಗ್ರೆ ನಿವಾಸಿ ಕಕ್ಕೆ ದೀಕ್ಷಿತ್(23), ಕೃಷ್ಣಾಪುರ ನಿವಾಸಿ ಸಂದೀಪ್ ದೇವಾಡಿಗ(32), ತಡಂಬೈಲ್ ನಿವಾಸಿ ಲಿಖಿತ್(31), ಮೀನಕಳಿಯ ನಿವಾಸಿ ತುಷಾರ್ ಅಮೀನ್(30), ಪಂಜಿಮೊಗರು ನಿವಾಸಿ ವಿನೋದ್ ಕುಮಾರ್ (32), ಬಜ್ಪೆ ನಿವಾಸಿ ಲತೇಶ್ ಜೋಗಿ(27), ಬೈಕಂಪಾಡಿ ನಿವಾಸಿ ಸಂದೀಪ್ ಪುತ್ರನ್(36), ಕಾವೂರು ಮೂಡುಶೆಡ್ಡೆ ನಿವಾಸಿ ಅಕ್ಷಿತಾ(28) ಬಂಧಿತ ಆರೋಪಿಗಳು.

ಬೈಕಂಪಾಡಿಯ ಮೀನಕಳಿ ಎಂಬಲ್ಲಿ ಜೂ.6 ರಂದು ರೌಡಿಶೀಟರ್ ರಾಜ ಅಲಿಯಾಸ್ ರಾಘವೇಂದ್ರ ಎಂಬಾತನನ್ನು ಹತ್ಯೆ ಮಾಡಿದ್ದರು. ಈ ಪ್ರಕರಣದ ಪ್ರಮುಖ ಇಬ್ಬರು ಆರೋಪಿಗಳನ್ನು ಬಂಧಿಸುವ ವೇಳೆ ಅವರು ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದಾಗ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿತ್ತು. ಇದೀಗ ಕೊಲೆ ಕೃತ್ಯಕ್ಕೆ ಸಹಕರಿಸಿದ, ಹಣಕಾಸು ನೆರವು ನೀಡಿದ ಹಾಗೂ ತಪ್ಪಿಸಿಕೊಳ್ಳಲು ಆಶ್ರಯ ನೀಡಿದ ಆರೋಪದ ಮೇಲೆ ಈ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:ಮಂಗಳೂರಲ್ಲಿ ತಲವಾರಿನಿಂದ ಕೊಚ್ಚಿ ರೌಡಿಶೀಟರ್ ಕೊಲೆ

Last Updated : Jun 13, 2022, 10:08 AM IST

ABOUT THE AUTHOR

...view details