ನೆಲ್ಯಾಡಿ(ದಕ್ಷಿಣ ಕನ್ನಡ): ಕೇರಳದ ಪ್ರಸಿದ್ಧ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಮುಖ್ಯ ಅರ್ಚಕರಾಗಿ ಕಡಬ ಮೂಲದ ಪ್ರವೀಣ ಎಡಪಡಿತ್ತಾಯ ಅವರು ನೇಮಕಗೊಂಡಿದ್ದಾರೆ.
ಅನಂತಪದ್ಮನಾಭ ದೇವಸ್ಥಾನದ ಮುಖ್ಯ ಅರ್ಚಕರಾಗಿ ಕಡಬದ ಪ್ರವೀಣ ಎಡಪಡಿತ್ತಾಯ ನೇಮಕ - ಕೇರಳ ಅನಂತ ಪದ್ಮನಾಭಸ್ವಾಮಿ ದೇವಸ್ಥಾನ
ಕಡಬದ ಪ್ರವೀಣ ಎಡಪಡಿತ್ತಾಯ ಅವರು ಕೇರಳದ ಪ್ರಸಿದ್ಧ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಮುಖ್ಯ ಅರ್ಚಕರಾಗಿ ನೇಮಕರಾಗಿದ್ದಾರೆ.
![ಅನಂತಪದ್ಮನಾಭ ದೇವಸ್ಥಾನದ ಮುಖ್ಯ ಅರ್ಚಕರಾಗಿ ಕಡಬದ ಪ್ರವೀಣ ಎಡಪಡಿತ್ತಾಯ ನೇಮಕ Praveen Edapadittaya](https://etvbharatimages.akamaized.net/etvbharat/prod-images/768-512-13883058-thumbnail-3x2-lek.jpg)
ಪ್ರವೀಣ ಎಡಪಡಿತ್ತಾಯ ಅವರು ಕಡಬ ತಾಲೂಕಿನ ಕೊಕ್ಕಡ ಸಮೀಪದ ಕೌಕ್ರಾಡಿ ಗ್ರಾಮದ ಪಿಲತಿಂಜ ನಿವಾಸಿಯಾಗಿದ್ದಾರೆ. ಅವರ ಅಜ್ಜ ವೆಂಕಟರಮಣ ಎಡಪಡಿತ್ತಾಯ, ದೊಡ್ಡಪ್ಪನಾದ ನಾರಾಯಣ ಎಡಪಡಿತ್ತಾಯ ಹಾಗೂ ಚಿಕ್ಕಪ್ಪ ಗೋವಿಂದ ಎಡಪಡಿತ್ತಾಯ ಕೂಡ ಕೇರಳದ ತಿರುವನಂತಪುರಂನಲ್ಲಿರುವ ಈ ವಿಶ್ವ ಪ್ರಸಿದ್ಧ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರವೀಣ ಉತ್ತಮ ಕೃಷಿಕರಾಗಿದ್ದು, ಪೌರೋಹಿತ್ಯವನ್ನೂ ಕಲಿತಿದ್ದರು. ಇವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಈ ಹಿಂದಿನಿಂದಲೂ ಕೊಕ್ಕಡದ ಎಡಪಡಿತ್ತಾಯ, ಶಬರಾಯ, ಉಪ್ಪಾರ್ಣ, ಬಾಳ್ತಿಲ್ಲಾಯ, ತೋಡ್ತಿಲ್ಲಾಯ ಮನೆತನದ ಸದಸ್ಯರಿಗೆ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುವ ಹಕ್ಕು ಇದೆ.