ಕರ್ನಾಟಕ

karnataka

ಉಚಿತ ಉಮ್ರಾಗೆ ತೆರಳುವ ಆಫರ್​ ನಿರಾಕರಿಸಿದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ

ನಿನ್ನೆ ಪದ್ಮಶ್ರೀ ಪ್ರಶಸ್ತಿ ಪಡೆದು ಇಂದು ಹುಟ್ಟೂರಿಗೆ ಆಗಮಿಸಿದ ಹಾಜಬ್ಬ ಅವರಿಗೆ ವಿವಿಧ ಸಂಘ-ಸಂಸ್ಥೆಗಳು ಹಾಜಬ್ಬ ಅವರ ಶಾಲೆಯಲ್ಲಿ ಸನ್ಮಾನಿಸಿದವು. ಈ ಸಂದರ್ಭದಲ್ಲಿ ದೇರಳಕಟ್ಟೆಯ ಸಂಸ್ಥೆಯೊಂದು ಹಾಜಬ್ಬನವರಿಗೆ ಉಚಿತವಾಗಿ ಉಮ್ರಾಗೆ ತೆರಳುವ ಅವಕಾಶ ಒದಗಿಸುವ ಭರವಸೆಯನ್ನು ನೀಡಿ ಈ ಕುರಿತಾದ ಪತ್ರವನ್ನು ಹಸ್ತಾಂತರಿಸಿತು.

By

Published : Nov 9, 2021, 9:44 PM IST

Published : Nov 9, 2021, 9:44 PM IST

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ
ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ

ಮಂಗಳೂರು:ಕಿತ್ತಲೆ ಹಣ್ಣು ವ್ಯಾಪಾರಿ ಹರೇಕಳ ಹಾಜಬ್ಬ ಅವರು ತನ್ನೂರಿಗೆ ಶಾಲೆಯನ್ನು ಕಟ್ಟಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದು ಅವರಿಗೆ ಮಂಗಳೂರಿನ ದೇರಳಕಟ್ಟೆಯ ಸಂಸ್ಥೆಯೊಂದು ನೀಡಿದ ಉಚಿತ ಉಮ್ರಾಗೆ ತೆರಳುವ ಆಫರ್​ ನಿರಾಕರಿಸಿದ್ದಾರೆ.

ನಿನ್ನೆ ಪದ್ಮಶ್ರೀ ಪ್ರಶಸ್ತಿ ಪಡೆದು ಇಂದು ಹುಟ್ಟೂರಿಗೆ ಆಗಮಿಸಿದ ಹಾಜಬ್ಬ ಅವರಿಗೆ ವಿವಿಧ ಸಂಘ-ಸಂಸ್ಥೆಗಳು ಹಾಜಬ್ಬ ಅವರ ಶಾಲೆಯಲ್ಲಿ ಸನ್ಮಾನಿಸಿದವು. ಈ ಸಂದರ್ಭದಲ್ಲಿ ದೇರಳಕಟ್ಟೆಯ ಸಂಸ್ಥೆಯೊಂದು ಹಾಜಬ್ಬನವರಿಗೆ ಉಚಿತವಾಗಿ ಉಮ್ರಾಗೆ ತೆರಳುವ ಅವಕಾಶ ಒದಗಿಸುವ ಭರವಸೆಯನ್ನು ನೀಡಿ ಈ ಕುರಿತಾದ ಪತ್ರವನ್ನು ಹಸ್ತಾಂತರಿಸಿತು.

ಆದರೆ ವೇದಿಕೆಯಲ್ಲಿಯೇ ಸಂಸ್ಥೆ ನೀಡಿದ ಆಫರ್​ ಅನ್ನು ಹರೇಕಳ ಹಾಜಬ್ಬ ಅವರು ನಿರಾಕರಿಸಿದ್ದಾರೆ. ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಅವರು, ನನಗೆ ಖಾಸಗಿಯಾಗಿ ಕೆಲವೊಂದು ಜವeಬ್ದಾರಿಗಳಿದ್ದು ಈ ಕಾರಣದಿಂದ ಉಚಿತ ಉಮ್ರಾ ಯಾತ್ರೆ ನಿರಾಕರಿಸಿದ್ದೇನೆ ಮತ್ತು ಅವರಿಂದ ಪತ್ರವನ್ನು ಸ್ವೀಕರಿಸಿಲ್ಲ ಎಂದು ತಿಳಿಸಿದರು.

ABOUT THE AUTHOR

...view details