ಕರ್ನಾಟಕ

karnataka

By

Published : Apr 4, 2021, 9:10 AM IST

Updated : Apr 4, 2021, 9:20 AM IST

ETV Bharat / city

ಉಳ್ಳಾಲದಲ್ಲಿ ಕೊಲೆಯಾದ ರೀತಿಯಲ್ಲಿ ಬಾಲಕನ ಶವ ಪತ್ತೆ; ಘಟನೆಗೆ PUBG ಗೇಮ್‌ ಕಾರಣ?

ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲ ಠಾಣಾ ವ್ಯಾಪ್ತಿಯ ಕೆ.ಸಿ.ರೋಡ್​ ಬಳಿ ನಾಪತ್ತೆಯಾಗಿದ್ದ ಬಾಲಕನೋರ್ವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬಾಲಕ ಪಬ್‌ಜಿ ಗೇಮ್‌ಗೆ ವ್ಯಸನಿಯಾಗಿದ್ದ ಎಂದು ಮಂಗಳೂರು ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.

Missing Boy Found dead  in ullal
ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ

ಉಳ್ಳಾಲ (ದಕ್ಷಿಣ ಕನ್ನಡ): ನಾಪತ್ತೆಯಾಗಿದ್ದ ಬಾಲಕನೋರ್ವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೆ.ಸಿ.ರೋಡ್​ ಬಳಿ ನಡೆದಿದೆ.

ಬಾಲಕ ಶವ ಪತ್ತೆ

ಕೆ.ಸಿ.ರೋಡ್ ನಿವಾಸಿ ಹನೀಫ್ ಎಂಬುವವರ ಪುತ್ರ ಹಕೀಫ್ (13) ಮೃತದೇಹ ಮನೆಯ 3 ಕಿ.ಮೀ ದೂರದಲ್ಲಿ ದೊರೆತಿದೆ. ನಿನ್ನೆ (ಶನಿವಾರ) ಸಂಜೆ ಹಕೀಫ್ ಕಾಣೆಯಾಗಿರುವುದಾಗಿ ಆತನ ಪೋಷಕರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು‌ ದಾಖಲಿಸಿದ್ದರು.

ಆದರೆ, ಇಂದು ಬಾಲಕನ ಮೃತದೇಹ ಕಲ್ಲಿನಿಂದ ಜಜ್ಜಿ ಕೊಲೆ‌ ಮಾಡಿರುವ ರೀತಿಯಲ್ಲಿ ಸಿಕ್ಕಿದೆ. ಪಬ್​ಜಿ ಗೇಮ್​ ವಿಚಾರಕ್ಕೆ ಬಾಲಕರ ನಡುವೆ ನಡೆದ ಸಂಘರ್ಷ ಕೊಲೆಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ವಿಜಯಪುರ: ಅಪರಿಚಿತ ವಾಹನ ಡಿಕ್ಕಿ, ಶಿಕ್ಷಕ ಸಾವು

Last Updated : Apr 4, 2021, 9:20 AM IST

ABOUT THE AUTHOR

...view details