ಮಂಗಳೂರು: ಸುರತ್ಕಲ್ನಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರಿಂದ 130 ಜನ ರೌಡಿಶೀಟರ್ಗಳ ಪರೇಡ್ ನಡೆಯಿತು.
ರೌಡಿ ಶೀಟರ್ಗಳಿಗೆ ಕ್ಲಾಸ್ ತೆಗೆದುಕೊಂಡ ಪೊಲೀಸ್ ಅಯುಕ್ತ ಎನ್.ಶಶಿಕುಮಾರ್, ನೀಟಾಗಿ ಕಟಿಂಗ್, ಶೇವಿಂಗ್ ಮಾಡಿಕೊಳ್ಳುವಂತೆ ರೌಡಿಗಳಿಗೆ ವಾರ್ನಿಂಗ್ ಮಾಡಿದರು.
ಮಂಗಳೂರು: ಸುರತ್ಕಲ್ನಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರಿಂದ 130 ಜನ ರೌಡಿಶೀಟರ್ಗಳ ಪರೇಡ್ ನಡೆಯಿತು.
ರೌಡಿ ಶೀಟರ್ಗಳಿಗೆ ಕ್ಲಾಸ್ ತೆಗೆದುಕೊಂಡ ಪೊಲೀಸ್ ಅಯುಕ್ತ ಎನ್.ಶಶಿಕುಮಾರ್, ನೀಟಾಗಿ ಕಟಿಂಗ್, ಶೇವಿಂಗ್ ಮಾಡಿಕೊಳ್ಳುವಂತೆ ರೌಡಿಗಳಿಗೆ ವಾರ್ನಿಂಗ್ ಮಾಡಿದರು.
ಜ. 27ರಂದು ಯುವಕರು ಪರಸ್ಪರ ಹೊಡೆದಾಟ ಮಾಡಿಕೊಂಡಿದ್ದ ಹಿನ್ನೆಲೆ ಪೊಲೀಸ್ ಆಯುಕ್ತರು ಸುರತ್ಕಲ್ನಲ್ಲಿ ಪರೇಡ್ ನಡೆಸಿದರು. ಒಬ್ಬೊಬ್ಬ ರೌಡಿಗಳ ವಿಚಾರಣೆ ನಡೆಸಿದ ಪೊಲೀಸ್ ಆಯುಕ್ತರು, ಕೇಸ್ ಯಾವುದೆಂದು ಅವರ ಬಳಿಯೇ ಮಾಹಿತಿ ಪಡೆದರು.
'ನಮ್ಮದು ಗ್ಯಾಂಗ್ ವಾರ್' ಎಂದು ಹೇಳಿದ ರೌಡಶೀಟರ್ವೊಬ್ಬನಿಗೆ ಕ್ಲಾಸ್ ತೆಗೆದುಕೊಂಡ ಪೊಲೀಸ್ ಆಯುಕ್ತರು, 'ಏನು ದೊಡ್ಡ ಗ್ಯಾಂಗಾ ನಿನ್ನದು, ಎಲ್ಲಾ ಗ್ಯಾಂಗ್ ಇಲ್ಲದಂಗೆ ಮಾಡ್ತೀನಿ' ಎಂದು ವಾರ್ನಿಂಗ್ ಕೊಟ್ಟರು. ದೇವರಿಗೆ ಕೂದಲು ಬಿಟ್ಟಿದ್ದೀನಿ ಎಂದು ಹೇಳಿದ ಮತ್ತೊಬ್ಬ ರೌಡಿಶೀಟರ್ಗೆ 'ಕೆಟ್ಟ ಕೆಲಸ ಮಾಡಿ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರ ಮಾಡ್ತೀರಾ' ಅಂತಾ ಸಖತ್ ಕ್ಲಾಸ್ ತೆಗೆದುಕೊಂಡರು.