ಮಂಗಳೂರು: ಎಂಆರ್ಪಿಎಲ್ ಸಂಸ್ಥೆಯ ಗುತ್ತಿಗೆಯಡಿ ಕಚ್ಚಾತೈಲ ಹಡಗಿನ ಪೈಪ್ ಲೈನ್ ನಿರ್ವಹಣೆ ಮಾಡುತ್ತಿದ್ದ ಮತ್ತೊಂದು ದೋಣಿಯು ನಿನ್ನೆ ದುರಂತಕ್ಕೀಡಾಗಿ 9 ಜನರು ಸಂಕಷ್ಟಕ್ಕೀಡಾಗಿದ್ದಾರೆ. ಇದೀಗ ಆ ದೋಣಿಯಲ್ಲಿದ್ದ ಓರ್ವ ಸಹಾಯಕ್ಕಾಗಿ ಮೊರೆಯಿಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಸಮುದ್ರ ಮಧ್ಯೆ ಅಪಾಯಕ್ಕೀಡಾದ ಬೋಟ್: ಸಹಾಯಕ್ಕಾಗಿ ವಿಡಿಯೋ ಮೂಲಕ ಮನವಿ - ಮಂಗಳೂರು ಹಡಗು ದುರಂತ
'ಚಂಡಮಾರುತಕ್ಕೆ ಸಿಲುಕಿಹಾಕಿಕೊಂಡಿದ್ದೇವೆ.. ರಕ್ಷಣೆ ಮಾಡಿ' ಎಂದು ಕಾರ್ಮಿಕನೋರ್ವ ಮನವಿ ಮಾಡಿ ವಿಡಿಯೋ ಹರಿ ಬಿಟ್ಟಿದ್ದಾನೆ. ಅಲೆಗಳ ಅಬ್ಬರದಿಂದಾಗಿ ಸಮುದ್ರದಲ್ಲಿ ಸಿಲುಕಿರುವ ಬೋಟ್ ಬಳಿ ಹೋಗಲು ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
![ಸಮುದ್ರ ಮಧ್ಯೆ ಅಪಾಯಕ್ಕೀಡಾದ ಬೋಟ್: ಸಹಾಯಕ್ಕಾಗಿ ವಿಡಿಯೋ ಮೂಲಕ ಮನವಿ man-asking-help-to-save-from-sea-waves-in-mangalore](https://etvbharatimages.akamaized.net/etvbharat/prod-images/768-512-11781414-thumbnail-3x2-kdkd.jpg)
ಸಮುದ್ರ ಮಧ್ಯೆ ಅಪಾಯಕ್ಕೀಡಾದ ಬೋಟ್
ಸಹಾಯಕ್ಕಾಗಿ ವಿಡಿಯೋ ಮೂಲಕ ಮನವಿ
'ಚಂಡಮಾರುತದಿಂದಾಗಿ ಸಿಲುಕಿಹಾಕಿಕೊಂಡಿದ್ದೇವೆ.. ರಕ್ಷಣೆ ಮಾಡಿ' ಎಂದು ಕಾರ್ಮಿಕನೋರ್ವ ಮನವಿ ಮಾಡಿ ವಿಡಿಯೋ ಹರಿ ಬಿಟ್ಟಿದ್ದಾನೆ. ಅಲೆಗಳ ಅಬ್ಬರದಿಂದಾಗಿ ಸಮುದ್ರದಲ್ಲಿ ಸಿಲುಕಿರುವ ಈ ಬೋಟ್ ಬಳಿ ಹೋಗಲು ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ದುರಂತಕ್ಕೀಡಾಗಿರುವ ಬೋಟ್ ಪಡುಬಿದ್ರೆ ಬಳಿಯ ಸಮುದ್ರದಲ್ಲಿ ಮಂಗಳೂರಿನಿಂದ 15 ನಾಟಿಕಲ್ ದೂರದಲ್ಲಿ ನಿಂತಿದೆ. ದೋಣಿಯಲ್ಲಿರುವ ಒಂಬತ್ತು ಮಂದಿ ಕಾರ್ಮಿಕರು ಸುರಕ್ಷಿತರಾಗಿದ್ದಾರೆ ಎನ್ನಲಾಗುತ್ತಿದೆ.
Last Updated : May 16, 2021, 6:16 PM IST