ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 22 ಮಂಗಗಳು ಸಾವನ್ನಪ್ಪಿದ್ದು, ಅವುಗಳಲ್ಲಿ 5 ಮಂಗಗಳ ಸ್ಯಾಂಪಲ್ಗಳನ್ನು ಪುಣೆಗೆ ಕಳುಹಿಸಲಾಗಿತ್ತು. ಈ ಐದೂ ಮಂಗಗಳ ವರದಿ ಬಂದಿದ್ದು, ಇದರಲ್ಲಿ ಕೆಎಫ್ಡಿ ವೈರಸ್ ಇರುವುದು ದೃಢಪಟ್ಟಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ.ಆರ್.ರಾಮಕೃಷ್ಣ ರಾವ್ ಹೇಳಿದರು.
ಸತ್ತ ಮಂಗಗಳಲ್ಲಿ ಕೆಎಫ್ಡಿ ವೈರಸ್ ದೃಢಪಟ್ಟಿಲ್ಲ: ಆರೋಗ್ಯಾಧಿಕಾರಿ - ಕೆಎಫ್ಡಿ ವೈರಸ್
ಸತ್ತ ಮಂಗಗಳ ಸ್ಯಾಂಪಲ್ಗಳನ್ನು ಪುಣೆಗೆ ಕಳುಹಿಸಲಾಗಿತ್ತು. ಆದರೆ ಅವುಗಳಲ್ಲಿ ಕೆಎಫ್ಡಿ ವೈರಸ್ ದೃಢಪಟ್ಟಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ.ಆರ್.ರಾಮಕೃಷ್ಣ ರಾವ್ ಹೇಳಿದರು.

ಆರೋಗ್ಯಾಧಿಕಾರಿ
ಆರೋಗ್ಯಾಧಿಕಾರಿ
ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಂಗಗಳು ಈ ಮೊದಲೂ ಸಾವನ್ನಪ್ಪುತ್ತಿದ್ದವು. ಆದರೆ ಕಾಯಿಲೆಯ ಭೀತಿ ಇರುವುದರಿಂದ ಈಗ ಸತ್ತ ಮಂಗಗಳ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಬೇಕಾದುದು ಅಗತ್ಯ. ಆದರೆ ಇತ್ತೀಚೆಗೆ ಸತ್ತ ಮಂಗಗಳಲ್ಲಿ ಕೆಎಫ್ಡಿ ವೈರಸ್ ದೃಢಪಟ್ಟಿಲ್ಲ ಎಂದು ಅವರು ಹೇಳಿದರು.