ಕರ್ನಾಟಕ

karnataka

ETV Bharat / city

ಎನ್ಐಟಿಕೆಯಲ್ಲಿ ಜಲ ಮರುಪೂರಣಕ್ಕೆ 'ಜಲಸಂಚಯ' ಯೋಜನೆ ಆರಂಭ - ಮಂಗಳೂರು ಲೇಟೆಸ್ಟ್​ ನ್ಯೂಸ್

ಮಂಗಳೂರಿನ ಸುರತ್ಕಲ್​ನಲ್ಲಿರುವ ಎನ್ಐಟಿಕೆ ಕಾಲೇಜಿನಲ್ಲಿ ಕಟ್ಟಡಗಳ ಮೇಲಿನ ಮಳೆ ನೀರು ಸಂಗ್ರಹಿಸಿ ಸಮರ್ಪಕವಾಗಿ ಬಳಕೆ ಮಾಡುವ ಉದ್ದೇಶದಿಂದ 'ಜಲಸಂಚಯ ಯೋಜನೆ' ಆರಂಭಿಸಲಾಗಿದೆ.

http://10.10.50.85:6060//finalout4/karnataka-nle/thumbnail/07-August-2021/12699490_80_12699490_1628309994885.png
ಎನ್ಐಟಿಕೆಯಲ್ಲಿ ಜಲ ಮರುಪೂರಣಕ್ಕೆ 'ಜಲಸಂಚಯ' ಯೋಜನೆ ಆರಂಭ

By

Published : Aug 7, 2021, 11:14 AM IST

Updated : Aug 7, 2021, 2:22 PM IST

ಮಂಗಳೂರು: ನಗರದ ಸುರತ್ಕಲ್​ನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್ಐಟಿಕೆ)ಯಲ್ಲಿ ಕಟ್ಟಡಗಳ ಮೇಲಿನ ಮಳೆ ನೀರು ಸಂಗ್ರಹಿಸಿ ಸಮರ್ಪಕವಾಗಿ ಬಳಕೆ ಮಾಡುವ ಉದ್ದೇಶದಿಂದ ಕೊಳ ಹಾಗೂ ಬಾವಿಯಲ್ಲಿ ನೀರು ಶೇಖರಣೆ ಮಾಡುವ ವಿನೂತನವಾದ 'ಜಲಸಂಚಯ ಯೋಜನೆ'ಯನ್ನು ಎನ್ಐಟಿಕೆ ಉಪನಿರ್ದೇಶಕ ಪ್ರೊ.ಅನಂತನಾರಾಯಣ ವಿ‌.ಎಸ್‌. ಉದ್ಘಾಟನೆ ಮಾಡಿದರು.

ಎನ್ಐಟಿಕೆಯ 62ನೇ ಸಂಸ್ಥಾಪನಾ ದಿನದ ಪ್ರಯುಕ್ತ ಜಲಸಂಚಯ ಯೋಜನೆಯನ್ನು ಆರಂಭಿಸಲಾಯಿತು. ಜಲಸಂಚಯ ಯೋಜನೆಯಡಿ ಎನ್ಐಟಿಕೆಯ ತ್ರಿಶೂಲ್ (8ನೇ ಬ್ಲಾಕ್) ಹಾಸ್ಟೆಲ್ ಸುತ್ತಮುತ್ತಲಿನ ಅಂತರ್ಜಲ ವೃದ್ಧಿಸಲು ವಿವಿಧ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಎನ್ಐಟಿಕೆ ಎದುರಿಸುತ್ತಿರುವ ನೀರಿನ ಅಸಮರ್ಪಕತೆ ಕಡಿಮೆ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ.

ತ್ರಿಶೂಲ್ ಬಾಲಕರ ಹಾಸ್ಟೆಲ್, ಕೆನರಾ ಬ್ಯಾಂಕ್ ಕಟ್ಟಡ ಮತ್ತು ರಾಜ್ಯ ಬ್ಯಾಂಕ್ ಕಟ್ಟಡದ ಛಾವಣಿಯಿಂದ ಮಳೆನೀರನ್ನು ಸಂಗ್ರಹಿಸಿ, ಅದನ್ನು ಕೊಳ ಮತ್ತು ಬಾವಿಗೆ ಹರಿಯುವಂತೆ ವಿನ್ಯಾಸಗೊಳಿಸಲಾಗಿದೆ. ಈ ಹಸಿರು ಜಾಗವನ್ನು ಸೃಷ್ಟಿಸಲು ಬಾವಿಯ ಸುತ್ತ 300ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಒಟ್ಟು 20 ಲಕ್ಷ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿದೆ.

ಈ ಸಂದರ್ಭ ಎನ್‌ಐಟಿಕೆ ಬೋಧಕೇತರ ಮತ್ತು ಗುತ್ತಿಗೆ ಸಿಬ್ಬಂದಿಯ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ತಲಾ 10 ಸಾವಿರ ರೂ. ನಗದು ವಿದ್ಯಾರ್ಥಿವೇತನ ಮತ್ತು ಪ್ರಮಾಣಪತ್ರವನ್ನು ನೀಡಲಾಯಿತು.

ಇದನ್ನೂ ಓದಿ:ನನಗೆ ಇನ್ಸಲ್ಟ್ ಮಾಡ್ತೀರಾ?.. ಸಿಎಂ ಆಪ್ತ ಸಹಾಯಕ, ಪೊಲೀಸರ ವಿರುದ್ಧ ರೇಗಾಡಿದ ರೇಣುಕಾಚಾರ್ಯ

Last Updated : Aug 7, 2021, 2:22 PM IST

ABOUT THE AUTHOR

...view details