ಕರ್ನಾಟಕ

karnataka

ಬೆಳ್ತಂಗಡಿಯಲ್ಲಿ ಅಕ್ರಮ ಜಾನುವಾರು ಸಾಗಾಟ: 7 ಮಂದಿ ಬಂಧನ

ಕೊಲ್ಲಾಪುರದಿಂದ ಕಾಸರಗೋಡಿಗೆ ಅಕ್ರಮವಾಗಿ ಲಾರಿ ಮೂಲಕ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಏಳು ಮಂದಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 2 ವಾಹನ ಮತ್ತು 17 ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ.

By

Published : Jul 14, 2019, 2:31 PM IST

Published : Jul 14, 2019, 2:31 PM IST

ವಶಪಡಿಸಿಕೊಂಡ ಲಾರಿ ಮತ್ತು ಜಾನುವಾರುಗಳು

ಮಂಗಳೂರು:ಲಾರಿಯಲ್ಲಿ ಕೊಲ್ಲಾಪುರದಿಂದ ಕಾಸರಗೋಡಿಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಏಳು ಮಂದಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ಕಾರು ಮತ್ತು ಲಾರಿಯಲ್ಲಿದ್ದ ವೇಣೂರಿನ ಹೈದರ್, ಕಾಸರಗೋಡು ಆಲಂಬಾಡಿಯ ಅಬ್ದುಲ್ ರಹಿಮಾನ್, ಪಡ್ರೆ ನಿವಾಸಿ ಬಾಬು , ಹಾಸನದ ಮಂಜೇಗೌಡ, ಕಾಸರಗೋಡು ಆಲಂಬಾಡಿಯ ಅಬ್ದುಲ್ ರಹಿಮಾನ್, ಮುಹಮ್ಮದ್ ಮುಸ್ತಫಾ ಮತ್ತು ಮುಹಮ್ಮದ್ ಅಕ್ಬರ್ ಬಂಧಿತರು.

ಲಾರಿಯಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಸಬರಬೈಲುವಿನಲ್ಲಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಲಾರಿಯಲ್ಲಿ 12 ಕೋಣ, 5 ಎಮ್ಮೆ ಸಾಗಾಟ ಮಾಡಲಾಗುತ್ತಿತ್ತು. ಆರೋಪಿಗಳನ್ನು ಬಂಧಿಸಿದ ಪೊಲೀಸರು 2 ವಾಹನ ಮತ್ತು 17ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details