ಕರ್ನಾಟಕ

karnataka

ETV Bharat / city

ಗುಡ್ಡ ಕುಸಿತ: ಮಂಗಳೂರು - ಬೆಂಗಳೂರು ರೈಲು ಮಾರ್ಗ ಬದಲಾವಣೆ - undefined

ಸುಬ್ರಹ್ಮಣ್ಯ ಮತ್ತು ಸಕಲೇಶಪುರ ಮಧ್ಯದ ಸಿರಿಬಾಗಿಲು ಎಂಬಲ್ಲಿ ಭಾರಿ ಮಳೆಗೆ ಗುಡ್ಡ ಕುಸಿದು ರೈಲ್ವೆ ಹಳಿಯ ಮೇಲೆ ಮಣ್ಣು ಉರುಳಿ ಬಿದ್ದ ಪರಿಣಾಮ ಇಂದು ಮಂಗಳೂರು ಮೂಲಕ ತೆರಳುವ ಕಾರವಾರ-ಬೆಂಗಳೂರು ರೈಲಿನ ಮಾರ್ಗ ಬದಲಾಯಿಸಲಾಗಿದೆ.

ಗುಡ್ಡ ಕುಸಿತ

By

Published : Jul 20, 2019, 4:01 PM IST

ಮಂಗಳೂರು: ರೈಲು ಹಳಿ ಮೇಲೆ ಗುಡ್ಡ ಕುಸಿದು, ಬಂಡೆಗಳು ಧರೆಗುರುಳಿರುವ ಹಿನ್ನೆಲೆ ಮಂಗಳೂರು ಬೆಂಗಳೂರು ನಡುವಿನ ರೈಲು ಮಾರ್ಗವನ್ನು ಬದಲಾಯಿಸಲಾಗಿದೆ.

ಸುಬ್ರಹ್ಮಣ್ಯ ಮತ್ತು ಸಕಲೇಶಪುರ ಮಧ್ಯದ ಸಿರಿಬಾಗಿಲು ಎಂಬಲ್ಲಿ ಭಾರಿ ಮಳೆಗೆ ಗುಡ್ಡ ಕುಸಿದು ರೈಲ್ವೆ ಹಳಿಯ ಮೇಲೆ ಮಣ್ಣು ಉರುಳಿದ್ದು, ಪರಿಣಾಮ ಇಂದು ಮಂಗಳೂರು ಮೂಲಕ ತೆರಳುವ ಕಾರವಾರ-ಬೆಂಗಳೂರು ರೈಲಿನ ಮಾರ್ಗ ಬದಲಾಯಿಸಲಾಗಿದೆ.

ಇನ್ನು ಮಂಗಳೂರಿನಿಂದ ಹಾಸನ ಮೂಲಕ ಬೆಂಗಳೂರಿಗೆ ಹೋಗಬೇಕಾದ ರೈಲು ಕೇರಳ, ತಮಿಳುನಾಡು ಮಾರ್ಗ ಮೂಲಕ ಬೆಂಗಳೂರು ತೆರಳುತ್ತಿದೆ. ಇನ್ನು ಹಳಿಯ ಮೇಲೆ ಬಿದ್ದ ಬಂಡೆ, ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.

For All Latest Updates

TAGGED:

ABOUT THE AUTHOR

...view details